Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಆದಿತ್ಯ – L 1 ಸೂರ್ಯನತ್ತ ಹಾರಲು ಕ್ಷಣಗಣನೆ – ಸಿದ್ಧವಾಗಿ ನಿಂತಿದೆ ಉಡಾವಣೆ ರಾಕೆಟ್

ಹೈದರಾಬಾದ್: ಚಂದ್ರಯಾನ-3 ಯಶಸ್ಸಿನ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತೊಂದು ಮೈಲಿಗಲ್ಲಿನತ್ತ ಸಾಗಿದೆ. ಸೂರ್ಯ ಗ್ರಹದ ಬಗ್ಗೆ ಅಧ್ಯಯನ ಮಾಡಲು ಆದಿತ್ಯ- L 1 ಮಿಷನ್ ರಾಕೆಟ್ ಈಗಷ್ಟೇ ಸೂರ್ಯನತ್ತ ತಯಾರಾಗಿ ನಿಂತಿದೆ. ಜಗತ್ತಿಗೇ ಬೆಳಕು ಮತ್ತು ಶಕ್ತಿ ಕೊಡುವ ಸೂರ್ಯನಲ್ಲಿ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ನಡೆಯುವಂಥ ಪ್ರಕ್ರಿಯೆಗಳು ಏನು? ಸೂರ್ಯನ ಶಾಖ, ಬೆಳಕು ಉಂಟಾಗಲು ಅದರ ಹಿಂದಿನ ರಾಸಾಯನಿಕ ಕ್ರಿಯೆ ಎಂಥದು? ಸೂರ್ಯನ ಜಾಜ್ವಲ್ಯತೆಗೆ ಕಾರಣವಾದ ಹೀಲಿಯಂ ಉತ್ಪಾದನೆಯ ಮೂಲ ಧಾತುವಿನ ಕಣಗಳೆಂಥವು? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ತಕ್ಕ ಉತ್ತರ ಕಂಡುಕೊಳ್ಳುವ ಒಂದು ಪ್ರಯೋಗಾತ್ಮಕ ಯತ್ನ ಇದಾಗಿದೆ. ಚಂದ್ರಯಾನ-3 ಯಶಸ್ಸಿನಂತೆ ಈ ಯೋಜನೆ ಕೂಡ ಯಶಸ್ಸು ಕಾಣಲಿ ಎಂಬುದು ಸಮಸ್ತ ಭಾರತೀಯರ ಆಶಯವಾಗಿದೆ.