Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇಂದಿನಿಂದ ಪಂಢರಾಪುರಕ್ಕೆ ಹೋಗುವ ಭಕ್ತರಿಗೆ ಗುಡ್ ನ್ಯೂಸ್

 

ಮೈಸೂರು: ಮೈಸೂರಿನಿಂದ ಸೋಲಾಪುರ ತನಕ ಸಂಚರಿಸುವ ‘ಗೋಳಗುಮ್ಮಟ’ ಎಕ್ಸ್‌ಪ್ರೆಸ್ ಇದೀಗ ಮಹಾರಾಷ್ಟ್ರದ ಪ್ರಮುಖ ಯಾತ್ರಾ ಸ್ಥಳವಾಗಿರುವ ಪಂಢರಾಪುರಕ್ಕೂ ಸಂಚರಿಸಲಿದೆ.

ಈ ಮೂಲಕ ವಿಠಲನ ಭಕ್ತರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ರೈಲುಗಳ ಸಂಖ್ಯೆ 16535/16536 ನಾಳೆಯಿಂದ ಈ ಸೇವೆ ಕಲ್ಪಿಸಲಾಗುವುದು ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

16535 ಸಂಖ್ಯೆಯ ರೈಲು ಮೈಸೂರು ರೈಲು ನಿಲ್ದಾಣದಿಂದ ಮಧ್ಯಾಹ್ನ 3.45ಕ್ಕೆ ಹೊರಟು ಮರುದಿನ ಮ. 12.25 ಗಂಟೆಗೆ ಪಂಢರಾಪುರಕ್ಕೆ ತಲುಪಲಿದೆ. ಎಂದು ತಿಳಿಸಿದೆ.