Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಉಡುಪಿ: ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ| ನಾಳೆ(ಸೆ. 5) ಬ್ರಹ್ಮಾವರದಲ್ಲಿ ಪ್ರಶಸ್ತಿ ಪ್ರಧಾನ

ಉಡುಪಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಿಸಲಾಗಿದ್ದು, ಹಿರಿಯ ಪ್ರಾಥಮಿಕ, ಕಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ತಲಾ ಐವರಂತೆ 15 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.

ಸೆ. 5ರಂದು ಬ್ರಹ್ಮಾವರದ ಶ್ಯಾಮಿಲಿ ಶನಾಯ ಸಭಾಭವನದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಕಿರಿಯ ಪ್ರಾಥಮಿಕ ವಿಭಾಗ

  1. ರಘುರಾಮ, ಬಹ್ಮಾವರ ತಾಲೂಕಿನ ಸಗ್ರಿನೋಳೆ ಸ.ಕಿ.ಪ್ರಾ. ಶಾಲೆಯ ಸಹ ಶಿಕ್ಷಕ
  2. ಯಶವಂತ, ಕುಂದಾಪುರ ತಾಲೂಕಿನ ಕೋಣಿಹರ ಸ.ಕಿ.ಪ್ರಾ. ಶಾಲೆಯ ಶಿಕ್ಷಕ
  3. ಸೀತಾ ಜೋಗಿ, ಬೈಂದೂರು ತಾಲೂಕಿನ ಮರವಂತೆ (ಪೂರ್ವ) ಸ.ಕಿ.ಪ್ರಾ. ಶಾಲೆಯ ಸಹಶಿಕ್ಷಕಿ
  4. ಶ್ಯಾಮಲಾ, ಉಡುಪಿ ತಾಲೂಕಿನ ಮಲ್ಪೆ ಗಾಂಧಿ ಶತಾಬ್ದ ಸ.ಮಾ.ಹಿ.ಪ್ರಾ. ಶಾಲೆಯ ಸಹಶಿಕ್ಷಕಿ
  5. ಶ್ರೀನಿವಾಸ ಭಟ್‌, ಕಾರ್ಕಳ ತಾಲೂಕಿನ ಮುದ್ರಾಡಿ ಉಪ್ಪಳ ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕ
    ಪ್ರಾಥಮಿಕ ಶಾಲಾ ವಿಭಾಗ
  6. ಕೆ. ಅರುಣ್‌ ಕುಮಾರ್‌ ಶೆಟ್ಟಿ, ಬ್ರಹ್ಮಾವರ ತಾಲೂಕಿನ ಪೆರ್ಡೂರು ಅನಂತ ಪದ್ಮನಾಭ ಅನುದಾನಿತ ಹಿ. ಪ್ರಾ. ಶಾಲೆಯ ಸಹ ಶಿಕ್ಷಕ
  7. ಶಶಿಧರ ಶೆಟ್ಟಿ, ಕುಂದಾಪುರ ತಾಲೂಕಿನ ಅಮಾಸೆಬೈಲು ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕ
  8. ಪ್ರವೀಣ್‌ ಕುಮಾರ್‌ ಶೆಟ್ಟಿ, ಬೈಂದೂರು ತಾಲೂಕಿನ ಆಲೂರು ಸರಸ್ವತಿ ಅ.ಹಿ. ಪ್ರಾ. ಶಾಲೆಯ ದೈ.ಶಿ. ಶಿಕ್ಷಕ
    9 ಶಂಕರ್‌, ಉಡುಪಿ ತಾಲೂಕಿನ ಮಲ್ಪೆಯ ಗಾಂಧಿ ಶತಾಬ್ದ ಸ.ಮಾ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ
  9. ದೇವದಾಸ ಪಾಟ್ಕರ್‌, ಕಾರ್ಕಳ ತಾಲೂಕಿನ ಮುಡಾರು ಸ.ಹಿ.ಪ್ರಾ. ಶಾಲೆಯ ಮುಖ್ಯಶಿಕ್ಷಕ

ಪ್ರೌಢಶಾಲಾ ವಿಭಾಗ

  1. ರಮೇಶ್‌ ಕುಲಾಲ್‌, ಬ್ರಹ್ಮಾವರ ತಾಲೂಕಿನ ಆವರ್ಸೆ ಸ. ಪ್ರೌಢ ಶಾಲೆಯ ಮುಖ್ಯಶಿಕ್ಷಕ
  2. ಅಜಯ್‌ ಕುಮಾರ್‌ ಶೆಟ್ಟಿ, ಕುಂದಾಪುರ ತಾಲೂಕಿನ ಕಂಡ್ಲೂರು ರಾಮನ್ಸ್‌ ಪ್ರೌಢ ಶಾಲೆಯ ಸಹ ಶಿಕ್ಷಕ
  3. ಚೆನ್ನಯ್ಯ ಯು., ಬೈಂದೂರು ತಾಲೂಕಿನ ತಲ್ಲೂರು ಸ. ಪ್ರೌಢ ಶಾಲೆಯ ಸಹ ಶಿಕ್ಷಕ
  4. ಬಾಲಕೃಷ್ಣ ಪಿ., ಉಡುಪಿ ತಾಲೂಕಿನ ಮಣಿಪಾಲ ರಾಜೀವನಗರದ ಸ. ಪ್ರೌಢ ಶಾಲೆಯ ಮುಖ್ಯಶಿಕ್ಷಕ
  5. ಶಿವಸುಬ್ರಹ್ಮಣ್ಯ ಜಿ. ಭಟ್‌, ಕಾರ್ಕಳ ತಾಲೂಕಿನ ನಲ್ಲೂರು ಸ.ಪ್ರೌ. ಶಾಲೆಯ ಸಹ ಶಿಕ್ಷಕ.