ಕಳೆದ ಬಾರಿ ಜೆಡಿಎಸ್ ಮೈತ್ರಿಯಿಂದ ನಮಗೆ ಕಹಿ ಅನುಭವವಾಗಿದೆ- ದಿನೇಶ್ ಗುಂಡೂರಾವ್
![](https://suddimane.com/wp-content/uploads/2023/09/WhatsApp-Image-2023-09-27-at-3.04.31-PM.jpeg)
ರಾಮನಗರ: ಬಿಜೆಪಿ ಜೊತೆಗಿನ ಮೈತ್ರಿಯೊಂದಿಗೆ ಜೆಡಿಎಸ್ ತನ್ನ ಕೊನೆಯ ಹಂತ ತಲುಪಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಹಿಂದೆ ಮೈತ್ರಿ ಮಾಡಿ ಅನುಭವಿಸಿದ್ದೆವೆ. ನಮಗೆ ಆ ಮೈತ್ರಿ ಬೇಡ. ಹೊಸದಾಗಿ ಮೈತ್ರಿ ಮಾಡಿಕೊಂಡವರು ಅನುಭವ ಮಾಡಿಕೊಳ್ಳಲಿ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಕಳೆದ ಬಾರಿ ಮೈತ್ರಿಯಿಂದ ನಮಗೆ ಕಹಿ ಅನುಭವವಾಗಿದೆ. ಈ ಬಾರಿ 28 ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆಮಾಡಲಿದ್ದಾರೆ. ನಮ್ಮ ಜೊತೆ ಬರುವ ಇತರೆ ಪಕ್ಷಗಳಿಗೆ ಸ್ವಾಗತ. ಮೈತ್ರಿಯಿಂದ ನಮಗೆ ಯಾವುದೇ ಆತಂಕ ಗೊಂದಲ ಇಲ್ಲ ಎಂದು ಹೇಳಿದರು.