Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕೊನೆಗೂ ಬೋನಿಗೆ ಬಿತ್ತು ಚಿರತೆ.!

 

ದಾವಣಗೆರೆ: ನ್ಯಾಮತಿ ತಾಲೂಕಿನ ಮಾದಾಪುರ ಗ್ರಾಮದ ಸುತ್ತಮುತ್ತಲಿನಲ್ಲಿ ಜನರಲ್ಲಿ ಆತಂಕ ಮಾಡಿದ್ದ ಚಿರತೆ ಬೋನಿಗೆ ಬಿದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ ಹಲವಾರು ದಿನಗಳಿಂದ ರೈತರ ಜಮೀನಿನಲ್ಲಿ ಚಿರತೆ ಸುತ್ತಾಡುತ್ತಿತ್ತು. ಇದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅದರಂತೆ, ವಾರದಿಂದ ಬೋನು ಇಟ್ಟು ಅದರಲ್ಲಿ ಶ್ವಾನವನ್ನು ಇರಿಸಿ ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಸದ್ಯ ಆಹಾರ ಅರಸುತ್ತಾ ಬಂದ ಚಿರತೆ ಶ್ವಾನ ತಿನ್ನಲು ಬೋನಿಗೆ ನುಗ್ಗಿ ಸೆರೆಯಾಗಿದೆ.