ಕೌಟುಂಬಿಕ ಕಲಹ ಹಾಗೂ ಹಣದ ದಾಹ: ಪತ್ನಿ ಹತ್ಯೆ, ಮಗು ಕೊಲೆಗೆ ಯತ್ನ
![](https://suddimane.com/wp-content/uploads/2023/07/Capture-49.png)
ಮಂಡ್ಯ: ಕೌಟುಂಬಿಕ ಕಲಹ ಹಾಗೂ ಹಣದ ದಾಹಕ್ಕೆ ಬಿದ್ದ ಪತಿಯೊಬ್ಬ ತನ್ನ ಪತ್ನಿಯನ್ನೇ ಮಾರಕಾಸ್ತ್ರಗಳಿಂದ ಹೊಡೆದು ಕೊಂದಿದ್ದಾನೆ. ಮುದ್ದಾದ ಒಂದೂವರೆ ವರ್ಷದ ಗಂಡು ಮಗುವನ್ನು ಕೂಡ ಕತ್ತು ಹಿಸುಕಿ ಹತ್ಯೆ ಮಾಡಲು ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಪಾಂಡವಪುರ ತಾಲೂಕಿನ ಹೊಸ ಯರಗನಹಳ್ಳಿ ಗ್ರಾಮದ ಹೊರವಲಯಲ್ಲಿರುವ ಒಂಟಿ ಮನೆಯಲ್ಲಿ ಈ ಘಟನೆ ನಡೆದಿದೆ. ವರ್ಷಿತಾ(24) ಕೊಲೆಯಾದ ಗೃಹಿಣಿ. ಒಂದೂವರೆ ವರ್ಷದ ಆರ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾನೆ. ಆರೋಪಿ ಗೌತಮ್ ಪರಾರಿಯಾಗಿದ್ದಾನೆ.
ಸರ್ಕಾರ ನೀಡಿರುವ ಮೊಬೈಲ್ ವಾಪಸ್; ನಾಳೆ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ
ಮೂರು ವರ್ಷಗಳ ಹಿಂದೆ ಮದುವೆಯಾಗಿ, ಗೌತಮ್ ಹಾಗೂ ಆತನ ಪತ್ನಿ ವರ್ಷಿತಾ ಗ್ರಾಮದ ಹೊರವಲಯದಲ್ಲಿರುವ ತಮ್ಮದೇ ತೋಟದ ಮನೆಯಲ್ಲಿ ಒಂದೂವರೆ ವರ್ಷದಿಂದ ಬದುಕು ಸಾಗಿಸುತ್ತಿದ್ದರು. ಗೌತಮ್ ಹಣಕಾಸಿನ ವಿಚಾರದಲ್ಲಿ ಪತ್ನಿಯ ಜತೆಗೆ ಜಗಳ ತೆಗೆಯುತ್ತಿದ್ದ. ಆ ಜಗಳ ವಿಕೋಪಕ್ಕೆ ತಿರುಗಿ ಶುಕ್ರವಾರ (ಜು.6) ಆಕೆಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಮಗ ಆರ್ಯನ ಕತ್ತು ತಿರುಗಿಸಿ ಕೊಲ್ಲಲು ಯತ್ನಿಸಿದ್ದಾನೆ. ಆರೋಪಿ ಗೌತಮ್ಗೆ ಯಾವುದೇ ಕೆಲಸ ಇರಲಿಲ್ಲ. ಈತನ ಜತೆ ಮದುವೆಗೆ ವರ್ಷಿತಾಳ ಸಂಬಂಧಿಕರು ಒಪ್ಪಲಿಲ್ಲ. ಆದರೆ ಗೌತಮ್ ಮದುವೆಯಾಗುವುದಿದ್ದರೆ ವರ್ಷಿತಾಳನ್ನೇ ಎಂದು ಹಠಕ್ಕೆ ಬಿದ್ದು ಮದುವೆಯಾಗಿದ್ದ.