Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಗೃಹಜ್ಯೋತಿಗೆ ಅರ್ಜಿ ಹಾಕಿಲ್ವ.? ಹಾಗಾದ್ರೆ  ಇನ್ನು ಕೇವಲ 4 ದಿನ ಮಾತ್ರ.!

 

ಬೆಂಗಳೂರು: ಸರ್ಕಾರದ ಉಚಿತ ವಿದ್ಯುತ್ ಯೋಜನೆ ‘ಗೃಹಜ್ಯೋತಿ’ಯ 3ನೇ ಬಿಲ್ಲಿಂಗ್ ಸೈಕಲ್ ಹತ್ತಿರವಾಗುತ್ತಿದೆ. ರಾಜ್ಯದಾದ್ಯಂತ ಇಲ್ಲಿ ತನಕ ಈ ಯೋಜನೆಗೆ ಸುಮಾರು ಒಂದೂವರೆ ಕೋಟಿ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ.

ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಯಾವುದೇ ಕಾಲ ಮಿತಿ ಇಲ್ಲ. ಆದರೆ ಪ್ರತಿ ತಿಂಗಳು 25ನೇ ತಾರೀಕಿನ ಒಳಗೆ ನೋಂದಣಿಯಾಗುವ ಗ್ರಾಹಕರಿಗೆ ಮಾತ್ರ ಆಯಾ ತಿಂಗಳ ಬಿಲ್ಡಿಂಗ್‌ನಲ್ಲಿ ಈ ಸೌಲಭ್ಯ ದೊರೆಯಲಿದೆ. ಹೀಗಾಗಿ ಇನ್ನೂ ನೋಂದಾಯಿಸಿಕೊಳ್ಳದ ಗ್ರಾಹಕರು ಈ ಅವಕಾಶವನ್ನು ಪಡೆದುಕೊಳ್ಳಬಹುದು.