Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಚೀನಾಗೆ ಅಪ್ಪಳಿಸಿದ ಚಂಡಮಾರುತ- 30ಕ್ಕೂ ಹೆಚ್ಚು ಜನರು ಬಲಿ

ಚೀನಾ: ಚಂಡಮಾರುತ ಅಪ್ಪಳಿಸಿದ ಪರಿಣಾಮ ಭಾರೀ ಮಳೆಯಾಗುತ್ತಿದ್ದು, ಡ್ರ್ಯಾಗನ್ ದೇಶ ತತ್ತರಿಸಿ ಹೋಗಿದೆ. ಫಿಲಿಪೈನ್ಸ್​​ಗೆ ಅಪ್ಪಳಿಸಿದ್ದ ಡೊಕ್ಸುರಿ ಸೈಕ್ಲೋನ್ ಚೀನಾದಲ್ಲೂ 30ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಇದೀಗ ಉತ್ತರ ಚೀನಾದ ರಾಜಧಾನಿ ಬೀಜಿಂಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, ಭೂಕುಸಿತ ಪ್ರಕರಣಗಳು ಅಜಾನುಭಾಹು ಬರ ಸಿಡಿಲಿನ ವೇಗಕ್ಕೆ ಬೀಜಿಂಗ್ ಹೊರತುಪಡಿಸಿ ಹೆಬೈ ರಾಜಧಾನಿ ಶಿಜಿಯಾಜುವಾಂಗ್‌ನ ಭಾಗಗಳಿಂದ 20,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಲ್ಲಿನ ಚೀನಾ ದೇಶದ ಸರ್ಕಾರ ತಿಳಿಸಿದೆ. ಚೀನಾದ ಹವಾಮಾನ ಇಲಾಖೆ ಅಧಿಕಾರಿಗಳು ಖಾನುನ್ ಎಂಬ ಹೆಸರಿನ ಮತ್ತೊಂದು ಚಂಡಮಾರುತದ ಸಮೀಪಿಸುವಿಕೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಇದು ಶೀಘ್ರವಾಗಿ ಬಲವನ್ನು ಪಡೆದುಕೊಳ್ಳುತ್ತದೆ ಮತ್ತು ಮುಂದಿನ ವಾರ ಚೀನಾದ ಜನನಿಬಿಡ ಕರಾವಳಿಯನ್ನು ಅಪ್ಪಳಿಸುತ್ತದೆ ಎಂದು ರಾಯಿಟರ್ಸ್ ವರದಿ ಮಾಡಿದೆ.