‘ಚೈತ್ರಾ ಕುಂದಾಪುರನಂತಹ ವ್ಯಕ್ತಿಗಳು ಎಲ್ಲಾ ಪಕ್ಷಗಳಲ್ಲೂ ಇರುತ್ತಾರೆ’ – ಅರವಿಂದ ಬೆಲ್ಲದ್
![](https://suddimane.com/wp-content/uploads/2023/09/WhatsApp-Image-2023-09-18-at-3.55.54-PM.jpeg)
ಹುಬ್ಬಳ್ಳಿ: ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಂದ ಕೋಟ್ಯಾಂತರ ರೂ. ವಂಚಿಸಿರುವ ಚೈತ್ರಾ ಕುಂದಾಪುರನಂತಹ ವ್ಯಕ್ತಿಗಳು ಎಲ್ಲಾ ಪಕ್ಷಗಳಲ್ಲೂ ಇರುತ್ತಾರೆ. ಚೈತ್ರಾ ಅವರು ಬಿಜೆಪಿ ಪಕ್ಷಕ್ಕೆ ಸೇರಿದವರಲ್ಲ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಡ್ಡು ಮಾಡುವುದು ಜನರಿಗೆ ಮೋಸ ಮಾಡುವುದನ್ನೇ ಕಾಯಕವಾಗಿಸಿಕೊಂಡ ಜನರು ಇರುತ್ತಾರೆ. ಅಂತವರ ಬಗ್ಗೆ ಜಾಗೃತಿ ವಹಿಸಬೇಕಾಗಿದೆ ಎಂದರು.
ಇನ್ನು ಎಲ್ಲೆಲ್ಲೋ ದುಡ್ಡು ಮಾಡಿದವರು ಹಾಗೂ ರಾಜಕೀಯಕ್ಕೆ ಹೇಗೆ ಬರಬೇಕು ಎಂದು ತಿಳಿಯದವರು ಈ ರೀತಿ ಮೋಸ ಹೋಗುತ್ತಾರೆ. ಟಿಕೆಟ್ ಕೊಡಿಸುವುದಾಗಿ ನಂಬಿಸುವ ನಕಲಿ ವ್ಯಕ್ತಿಗಳಿಂದ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದಿದ್ದಾರೆ.
ಚೈತ್ರಾ ಕುಂದಾಪುರ, ಬಿಜೆಪಿಯ ತತ್ವ ಸಿದ್ಧಾಂತಗಳ ಕುರಿತಾಗಿ ಮಾತನಾಡಿದ ಕೂಡಲೇ ಅವರು ಪಕ್ಷದವರು ಆಗುವುದಿಲ್ಲ. ಪಕ್ಷದಲ್ಲಿ ಟಿಕೆಟ್ ಪಡೆಯುವುದಕ್ಕೆ ಅದರದ್ದೇ ಆದ ನಿಯಮ, ಪದ್ಧತಿಗಳಿವೆ. ಟಿಕೆಟ್ ನೆಪದಲ್ಲಿ ವಂಚನೆ ಮಾಡಿರುವ ಚೈತ್ರಾ ಕುಂದಾಪುರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.