Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಟಿ20 ಕ್ರಿಕೆಟ್​ನಲ್ಲಿ ವಿಶ್ವದಾಖಲೆ ಬರೆದ ಧೋನಿ

ವಿಶಾಖಪಟ್ಟಣ: ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ನಾಯಕ ಎಂ.ಎಸ್‌. ಧೋನಿ ಟಿ20 ಕ್ರಿಕೆಟ್​ನಲ್ಲಿ ವಿಶ್ವದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಪೃಥ್ವಿ ಶಾ ಕ್ಯಾಚ್​ ಪಡೆಯುವ ಮೂಲಕ ಟಿ20 ಕ್ರಿಕೆಟ್​ ಇತಿಹಾಸದಲ್ಲಿ 300 ಬ್ಯಾಟರ್​ಗಳನ್ನು ಔಟ್​ ಮಾಡಿದ ಏಕೈಕ ವಿಕೆಟ್​ ಕೀಪರ್ ಎಂಬ ವಿಶ್ವದಾಖಲೆಗೆ ಪಾತ್ರರಾದರು.

ಈಗಾಗಲೇ ಧೋನಿ ಟಿ20 ಮಾದರಿಯಲ್ಲಿ ಹೆಚ್ಚು ಬಲಿ ಪಡೆದ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. 300 ಬಲಿ ಪಡೆದಿರುವ ಮಹೇಂದ್ರ ಸಿಂಗ್ ಧೋನಿ ಅಗ್ರಸ್ಥಾನದಲ್ಲಿದ್ದರೆ, ಇವರ ನಂತರ 2ನೇ ಸ್ಥಾನದಲ್ಲಿರುವ ದಿನೇಶ್​ ಕಾರ್ತಿಕ್ 274 ವಿಕೆಟ್ ಪಡೆದಿದ್ದಾರೆ. ಪಾಕಿಸ್ತಾನದ ಕಮ್ರನ್ ಅಕ್ಮಲ್​ ಕೂಡ 274 ಮಂದಿಯನ್ನ ಔಟ್ ಮಾಡಿದ್ದಾರೆ. ನಂತರ ಕ್ವಿಂಟನ್ ಡಿಕಾಕ್​, ಜಾಸ್​ ಬಟ್ಲರ್​ 209 ಬಲಿ ಪಡೆದಿದ್ದಾರೆ.