Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಢಾಕಾ: ಭೀಕರ ಬಸ್‌ ಅಪಘಾತಕ್ಕೆ 17 ಮಂದಿ ಬಲಿ

ಬಾಂಗ್ಲಾದೇಶ : ಬಸ್‌ ಕೆರೆಗೆ ಬಿದ್ದು 17 ಮಂದಿ ಸಾವನ್ನಪ್ಪಿರುವ ಭೀಕರ ರಸ್ತೆ ಅಪಘಾತ ಬಾಂಗ್ಲಾದೇಶದ ಝಲ್ಕಾತಿ ಜಿಲ್ಲೆಯಲ್ಲಿ ಸಂಭವಿಸಿದೆ.

ಈ ಬಸ್‌ 60ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಭಂಡಾರಿಯಾ ಉಪ ಜಿಲ್ಲೆಯಿಂದ ನೈಋತ್ಯ ವಿಭಾಗೀಯ ಪ್ರಧಾನ ಕಚೇರಿ ಬರಿಸಾಲ್ಗೆ ಎಂಬಲ್ಲಿಗೆ ಹೋಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿದ್ದು, ಈಗಾಗಲೇ 17 ಶವ ಹೊರ ತೆಗೆಯಲಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಈ ಘಟನೆಯಲ್ಲಿ 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.