Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ದೇಶದ ಜನರು ಇನ್ಮುಂದೆ ‘ಇಂಡಿಯಾ’ ಬದಲಾಗಿ ‘ಭಾರತ’ ಅಂತಾ ಉಲ್ಲೇಖಿಸಿ – RSS ಮುಖ್ಯಸ್ಥ ಮೋಹನ್ ಭಾಗವತ್

ನಮ್ಮ ದೇಶದ ಹೆಸರು ಭಾರತ ಅಂತ ಹಿಂದಿನಿಂದಲೂ ಇದೆ. ಭಾಷೆ ಯಾವುದೇ ಆಗಿರಲಿ, ಹೆಸರು ಒಂದೇ ಆಗಿರುತ್ತದೆ. ಹೀಗಾಗಿ, ಭಾಷೆಗಳ ವ್ಯತ್ಯಾಸವನ್ನ ಲೆಕ್ಕಿಸದೆ ಜನರು ಇನ್ಮುಂದೆ ಇಂಡಿಯಾ ಬದಲಾಗಿ ‘ಭಾರತ’ ಅಂತ ಕರೆಯೋಕೆ ಶುರು ಮಾಡಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

‘ಭಾರತ’ ಅನ್ನೋ ಹೆಸರು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಅದೇ ರೀತಿ ಎಲ್ಲಾ ಕ್ಷೇತ್ರಗಳಲ್ಲೂ ‘ಇಂಡಿಯಾ’ ಹೆಸರನ್ನ ಬದಲಿಸಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸೋದು ಮುಖ್ಯವಾಗಿದೆ ಅಂತ ಭಾಗವತ್ ಹೇಳಿದ್ದಾರೆ. ಇದನ್ನು ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತಿದೆ. ನಮ್ಮ ದೇಶದ ಹೆಸರು ಭಾರತ ಅಂತ ಹಿಂದಿನಿಂದಲೂ ಇದೆ. ಆದ್ದರಿಂದ ಇನ್ಮುಂದೆ ಭಾರತ ಅಂತ ಕರೆಯೋಕೆ ಶುರು ಮಾಡಬೇಕು ಎಂದು ಭಾಗವತ್ ಹೇಳಿದ್ದಾರೆ. ಇನ್ನು, ಭಾರತ ಹಿಂದೂ ರಾಷ್ಟ್ರ ಅಂತ ಭಾಗವತ್‌ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ, ಭಾರತ ಎಂದಿಗೂ ಹಿಂದು ರಾಷ್ಟ್ರವಲ್ಲ. ನಮ್ಮ ಸಂವಿಧಾನ ಜಾತ್ಯಾತೀತ ರಾಜ್ಯದ ಕಲ್ಪನೆಯನ್ನು ಆಧರಿಸಿದೆ. ಭಾರತದಲ್ಲಿರುವ ಎಲ್ಲಾ ಜನರು ಭಾರತೀಯರು. ನಮ್ಮ ಭಾರತೀಯ ಸಂವಿಧಾನ ಎಲ್ಲಾ ಧರ್ಮಗಳು, ನಂಬಿಕೆಗಳು, ಪಂಗಡಗಳು ಮತ್ತು ಸಂಸ್ಕೃತಿಗಳನ್ನು ಪ್ರತಿನಿಧಿಸುತ್ತದೆ ಅಂತ ಹೇಳಿದ್ದಾರೆ.