Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಟಿ ತಮನ್ನಾ ಮಹಿಳಾ ಮೀಸಲಾತಿ ಬಗ್ಗೆ ಹೇಳಿದ್ದು ಹೀಗೆ.!

 

ದೆಹಲಿ: ದೆಹಲಿಯ ನೂತನ ಸಂಸತ್ ಭವನಕ್ಕೆ ನಟಿ ತಮನ್ನಾ ಭೇಟಿ ನೀಡಿ, ಕಲಾಪ ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮಸೂದೆಯನ್ನು ಶ್ಲಾಘಿಸಿದ್ದಾರೆ.

ಬಹಳಷ್ಟು ಜನ ಚಲನಚಿತ್ರ ಉದ್ಯಮ ಆಗಲಿ, ರಾಜಕೀಯ ಸೇರುವುದಾಗಲಿ ಕಷ್ಟ ಎಂದು ಭಾವಿಸುತ್ತಾರೆ. ಈ ಮಸೂದೆಯು ಸಾಮಾನ್ಯ ಜನರನ್ನು ರಾಜಕೀಯಕ್ಕೆ ಆಕರ್ಷಿಸುತ್ತದೆ ಮತ್ತು ಪ್ರೇರೇಪಿಸುತ್ತದೆ ಎಂದಿದ್ದಾರೆ. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲಾಗಿದೆ.