Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಿಶ್ಚಿತಾರ್ಥ ರದ್ದು: ಯುವತಿಯನ್ನು ಚಾಕುವಿನಿಂದ ಇರಿದು ಕೊಲೆಗೈದ ಪಾಗಲ್ ಪ್ರೇಮಿ

ಗುರುಗ್ರಾಮ್: ನಿಶ್ಚಿತಾರ್ಥವನ್ನು ರದ್ದುಪಡಿಸಿದ ಕೆಲವೇ ದಿನಗಳಲ್ಲಿ 23 ವರ್ಷದ ವ್ಯಕ್ತಿಯೊಬ್ಬ ತನ್ನ 19 ವರ್ಷದ ಮಾಜಿ ಪ್ರೇಯಸಿಯನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಇಂದು ಬೆಳಿಗ್ಗೆ ಗುರ್ಗಾಂವ್‌ನಲ್ಲಿ ನಡೆದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಆಘಾತಕಾರಿ ದೃಶ್ಯಗಳು ಯುವಕ ಯುವತಿಯನ್ನು ಕೊಲೆಗೈಯ್ಯುವುದನ್ನು ತೋರಿಸುತ್ತವೆ.

ವಿಟ್ಲ: ಡಿವೈಡರ್ ಜಂಪ್ ಮಾಡಿದ ಕಾರು- ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿ..!

ಯುವತಿಗೆ ಚಾಕುವಿನಿಂದ ಇರಿಯುವಾಗ ಆಕೆಯನ್ನು ರಕ್ಷಿಸಲು ಅಲ್ಲಿದ್ದವರು ಮುಂದಾಗುತ್ತಾರೆ. ಆದ್ರೆ, ಯಾರೂ ಆಕೆಯನ್ನು ಉಳಿಸಿಕೊ‍ಳ್ಳಲು ಸಾಧ್ಯವಾಗಲಿಲ್ಲ. ಯುವತಿ ರಕ್ತದ ಮಡುವಿನಲ್ಲಿ ಬಿದ್ದು, ಕೊನೆಯುಸಿರೆಳೆಯುವುದನ್ನು ನೋಡಬಹುದು. ಪೊಲೀಸರ ಪ್ರಕಾರ, ಯುವಕ ಮತ್ತು ಯುವತಿ ಇಬ್ಬರೂ ಉತ್ತರ ಪ್ರದೇಶದ ಬದೌನ್ ಮೂಲದವರು. ಯುವತಿ ಮನೆಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ನಾಲ್ಕು ತಿಂಗಳ ಹಿಂದೆ ಇಬ್ಬರ ನಿಶ್ಚಿತಾರ್ಥ ನಡೆದಿತ್ತು, ಆದರೆ, ಕೆಲವು ದಿನಗಳ ಹಿಂದೆ ನಿಶ್ಚಿತಾರ್ಥವನ್ನು ರದ್ದುಗೊಳಿಸಲಾಯಿತು. ಇದರಿಂದ ಅಸಮಾಧಾನಗೊಂಡಿದ್ದ ಯುವಕ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.‌