Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮೇಲೆ FIR ದಾಖಲಾಗಿದ್ದು ಈ ಕಾರಣಕ್ಕೆ.!

 

ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಮಧ್ಯಪ್ರದೇಶ  ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್, ಮಾಜಿ ಪಿಸಿಸಿ ಮುಖ್ಯಸ್ಥ ಅರುಣ್ ಯಾದವ್ ವಿರುದ್ಧ ಭೋಪಾಲ್ ಮತ್ತು ಮಧ್ಯಪ್ರದೇಶದ ಇಂದೋರ್ ಸೇರಿದಂತೆ 41 ಜಿಲ್ಲೆಗಳಲ್ಲಿ FIR ದಾಖಲಾಗಿದೆ. 

ಈ ನಾಯಕರು ಬಿಜೆಪಿ ಸರ್ಕಾರ 50% ಕಮಿಷನ್ ಪಡೆಯುತ್ತಿದೆ ಎಂದು ಆರೋಪಿಸಿದ್ದರು. ಬಿಜೆಪಿ ನಾಯಕರ ದೂರಿನ ಮೇರೆಗೆ ಭೋಪಾಲ್‌ನ ಕ್ರೈಂ ಬ್ರಾಂಚ್ ಮತ್ತು ಇಂದೋರ್‌ನ ಸಂಯೋಗಿತಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.