ಬನ್ನೇರುಘಟ್ಟ ಉದ್ಯಾನವನದಲ್ಲಿ ಮಾರಕ ವೈರಸ್ಗೆ 7 ಚಿರತೆ ಮರಿಗಳು ಸಾವು
![](https://suddimane.com/wp-content/uploads/2023/09/WhatsApp-Image-2023-09-17-at-3.18.56-PM.jpeg)
ಅನೇಕಲ್:ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪೆಲಿನ್ ಪ್ಯಾನ್ಲೂಕೋಪೇನಿಯಾ ಎಂಬ ಮಾರಕ ವೈರಸ್ಗೆ ಏಳು ಚಿರತೆ ಮರಿಗಳು ಸಾವನ್ನಪ್ಪಿವೆ.
ರಾಜ್ಯದ ನಾನಾ ಭಾಗಗಳಲ್ಲಿ ಸಿಕ್ಕ ಚಿರತೆ ಮರಿಗಳನ್ನು ರಕ್ಷಣೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನವಕ್ಕೆ ತಂದು ಝೂನಲ್ಲಿ ಇರಿಸಲಾಗಿತ್ತು. ಆದರೆ ಈ ಚಿರತೆ ಮರಿಗಳು ಸೋಂಕಿಗೆ ಮರಣ ಹೊಂದಿದೆ.
ಈ ಮಾರಕ ರೋಗ ಆಗಸ್ಟ್ 22ರಂದು ಕಾಣಿಸಿಕೊಂಡಿತ್ತು, ಸೆಪ್ಟೆಂಬರ್ 5ರ ಒಳಗೆ ರೋಗಕ್ಕೆ ಏಳು ಚಿರತೆಗಳ ಸಾವಿಗೀಡಾದವು. ಸೋಂಕು ತಗುಲಿದ ಬಳಿಕ ಜೀರ್ಣ ಕ್ರೀಯೆ ಆಗದೇ ರಕ್ತ ವಾಂತಿಯಾಗಿ ಚಿರತೆ ಮರಿಗಳು ಪ್ರಾಣ ಬಿಟ್ಟಿವೆ.
ಈ ಸೋಂಕು ಮನೆಯ ಸಾಕು ಬೆಕ್ಕುಗಳಿಂದ ಹರಡುತ್ತದೆ ಎನ್ನಲಾಗಿದೆ. ಮನೆಯಲ್ಲಿ ಬೆಕ್ಕು ಸಾಕಿದ್ದ ಅನಿಮಲ್ ಕೀಪರ್ಗಳು ಊಟ ಪ್ರಾಣಿಗಳಿಗೆ ಆಹಾರ ನೀಡಲು ಹೋದಾಗ ಸೋಂಕು ಅಂಟಿರುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕಾಗಿ ಡಾ.ಉಮಾಶಂಕರ್, ಡಾ. ಮಂಜುನಾಥ್ ನೇತೃತ್ವದಲ್ಲಿ 11 ಜನರ ತಂಡ ರಚಿಸಲಾಗಿದೆ. ಈಗ ಬೂಸ್ಟರ್ ಡೋಸ್ ನೀಡಿ ಪ್ರಾಣಿಗಳಿಗೆ ಸೋಂಕು ತಗುಲದಂತೆ ಕ್ರಮ ಕೈಗೊಂಡಿದೆ.