Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಬಿಜೆಪಿ ಜೊತೆ ಮೈತ್ರಿ ಬೆಳೆಸುವ ಆತುರ ಕಾತುರ ನಮಗಿಲ್ಲ’- ಇಬ್ರಾಹಿಂ

ಬೆಂಗಳೂರು: ಬಿಜೆಪಿ ಜೊತೆ ಮೈತ್ರಿ ಬೆಳೆಸುವ ಆತುರ, ಕಾತುರ ನಮಗಿಲ್ಲ ಎಂದು ಜೆಡಿಎಸ್ ಪಕ್ಷದ ಅಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.

ನಗರದಲ್ಲಿಂದು ಪತ್ರಿಕಾ ಗೋಷ್ಟಿಯಲ್ಲಿ ಮಾತಾಡಿದ ಅವರು, ತಾವು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಪಕ್ಷ ಸೇರಿದ್ದಕ್ಕೆ ಯಾವುದೇ ಕೊರಗು ಪಶ್ಚಾತ್ತಾಪ ಇಲ್ಲ. ಮಂತ್ರಿಯಾಗಲಿಲ್ಲ ಅನ್ನೋ ಕೊರಗಿಗಿಂತ ಹೆಚ್ಚು ಕಷ್ಟ ಕಾಲದಲ್ಲಿ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ಜೊತೆ ನಿಂತುಕೊಂಡ ತೃಪ್ತಿ ಇದೆ ಎಂದು ಅವರು ಹೇಳಿದರು.

92 ವರ್ಷದ ದೇವೇಗೌಡರ ಜೊತೆ 42 ವರ್ಷದ ಸ್ನೇಹ-ಬಾಂಧವ್ಯ ಇದೆ ಎಂದು ಹೇಳಿದ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಲಿಲ್ಲ. ಮೈತ್ರಿ ಬಗ್ಗೆ ಎರಡು ಪಕ್ಷಗಳ ನಾಯಕರಿಗಿಂತ ಮಾಧ್ಯಮದವರಿಗೆ ಹೆಚ್ಚು ಕುತೂಹಲವಿದ್ದಂತಿದೆ ಎಂದು ಹೇಳಿದರು. ಪಕ್ಷದ ರಾಜ್ಯಾಧ್ಯಾಕ್ಷನಾಗಿದ್ದರೂ ತಾವು ನಿಲುವು ಪ್ರಕಟಿಸಲಾಗದು ಎಂದರು.