Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭಾರತದ ಧ್ವಜ ಅವಮಾನಿಸಿ ಕ್ಷಮೆ ಕೇಳಿದ ಮಾಲ್ಡೀವ್ಸ್ ಸಚಿವೆ

ಮಾಲ್ಡೀವ್ಸ್: ಭಾರತದ ರಾಷ್ಟ್ರಧ್ವಜದ ಅಶೋಕ ಚಕ್ರವನ್ನು ಮಾಲ್ಡೀವ್ಸ್ ವಿರೋಧ ಪಕ್ಷ ಎಂಡಿಪಿ ಪೋಸ್ಟರ್‌ನೊಂದಿಗೆ ಎಡಿಟ್ ಮಾಡಲಾಗಿತ್ತು.

ಇದನ್ನು ಮಾಲ್ಡೀವ್ಸ್‌ನ ಸಚಿವೆ ಮರಿಯಮ್ ಶಿಯುನಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದರ ವಿರುದ್ಧ ಕ್ರಮ ಕೈಗೊಂಡ ಮಾಲ್ಡೀವ್ಸ್ ಸರಕಾರ ಮರಿಯಮ್ ಶಿಯುನಾ ಅವರನ್ನು ಸಚಿವ ಸ್ಥಾನದಿಂದ ಅಮಾನತಿನಲ್ಲಿ ಇರಿಸಿದೆ.

ಮರಿಯಮ್ ಶಿಯುನಾ ಅವರು ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ ಮಡುವ ಮೂಲಕ ಭಾರತ ಹಾಗೂ ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಡುವಂತೆ ಮಾಡಿದ್ದಾರೆ ಎಂದು ಮಾಲ್ಡೀವ್ಸ್ ಸರಕಾರ ದೂಷಿಸಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವೆ ಮರಿಯಮ್ ಶಿಯುನಾ ‘ಇಲ್ಲಿ ಉಂಟಾಗಿರುವ ಎಲ್ಲ ಗೊಂದಲಗಳಿಗೆ ನಾನು ಕ್ಷಮೆ ಯಾಚಿಸುತ್ತೇನೆ’ ಎಂದು ಹೇಳಿದ್ದಾರೆ.