ಮಣಿಪುರ: ವೀಡಿಯೋ ವೈರಲಾಗುವರೆಗೆ ಯಾರು ನಮ್ಮನ್ನು ನಂಬಿಲ್ಲ, ದೇವರೇ ವೀಡಿಯೋ ಹೊರ ತಂದಿರಬೇಕು – ಸಂತ್ರಸ್ಥ ಕಾರ್ಗಿಲ್ ಯೋಧನ ಅಳಲು
![](https://suddimane.com/wp-content/uploads/2023/08/WhatsApp-Image-2023-08-03-at-10.48.12-AM.jpeg)
ಮಣಿಪುರದಲ್ಲಿ ಮೇ 4 ರಂದು ನಡೆದ ಹಿಂಸಾಚಾರದ ಸಂದರ್ಭದಲ್ಲಿ ಜನಸಮೂಹವೊಂದು ತನ್ನ ಪತ್ನಿಯನ್ನು ವಿವಸ್ತ್ರಗೊಳಿಸಿ ಪರೇಡ್ ಮಾಡಿದ ಕುರಿತು 65 ವರ್ಷದ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಯೋಧ ಇಂಡಿಯನ್ ಎಕ್ಸ್ಪ್ರೆಸ್’ನೊಂದಿಗೆ ಮಾತನಾಡಿದ್ದು , “ದೇವರು ವೀಡಿಯೋವನ್ನು (ಲೈಂಗಿಕ ದೌರ್ಜನ್ಯದ) ವೈರಲ್ ಆಗುವಂತೆ ಮಾಡಿರಬೇಕು ಎಂದು ಹೇಳಿದ್ದಾರೆ. ಆದರಿಂದಾಗಿ ಸತ್ಯ ಹೊರಬಂದಿದೆ ಎಂದು ದುಃಖ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಹಿಂಸಾಚಾರದ ಎರಡನೇ ದಿನದಂದು ಮಾಜಿ ಯೋಧನ ಹೆಂಡತಿ ಮತ್ತು ಇತರ ಇಬ್ಬರು ಕುಕಿ-ಜೋಮಿ ಮಹಿಳೆಯರನ್ನು ಜನಸಮೂಹವು ಗುರಿಯಾಗಿಸಿತ್ತು. ಅಮಾನುಷವಾಗಿ ಲೈಂಗಿಕ ದೌರ್ಜನ್ಯ ಎಸಗಿದ ವೀಡಿಯೊ ಜುಲೈ 19 ರಂದು ವೈರಲಾಗಿತ್ತು. ಇದು ರಾಷ್ಟ್ರ ಮಟ್ಟದಲ್ಲಿ ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು.
“ಅಲ್ಲಿಯವರೆಗೆ, ಪೊಲೀಸರು ಅಥವಾ ಸರ್ಕಾರದಿಂದ ಯಾರೂ ನಮ್ಮನ್ನು ಪರಿಗಣಿಸಿರಲಿಲ್ಲ” ಎಂದು ಸರಕಾರದ ವೈಫಲ್ಯವನ್ನು ತಿಳಿಸಿದರು.
“ಕ್ರಮವನ್ನು ಮೊದಲೇ ತೆಗೆದುಕೊಳ್ಳಬೇಕಾಗಿತ್ತು, ಆದರೆ ವೀಡಿಯೊ ವೈರಲಾಗುವ ಮೊದಲು, ನಾವು ಏನಾಯಿತು ಎಂದು ನಾವು ಅವರಿಗೆ ಹೇಳಿದಾಗ ಯಾರೂ ನಮ್ಮನ್ನು ನಂಬಲಿಲ್ಲ” ಎಂದು ಅವರು ಹೇಳಿದರು, ಚುರಾಚಂದ್ಪುರ ಪಟ್ಟಣದ ಕಾಲೇಜು ಕೊಠಡಿಯೊಳಗೆ ಮಹಿಳಾ ಕುಟುಂಬಗಳು ವಾಸಿಸುತ್ತಿದ್ದಾರೆ. ಏತನ್ಮಧ್ಯೆ, ಮಹಿಳೆಯರು “ಸುರಕ್ಷಿತ ವಲಯ” ದಲ್ಲಿದ್ದಾರೆ ಎಂದು ಹೇಳಿದರು.