Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮದುವೆಯ ವಿಡಿಯೋದಲ್ಲಿ ಸೆರೆಯಾದ ಚಿರತೆಗಳು – ಗ್ರಾಮಸ್ಥರಲ್ಲಿ ಆತಂಕ

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕು ಯಗಟಿ ಸಮೀಪದ ಶಿವಗಂಗಾ ಗಿರಿ ಬೆಟ್ಟದಲ್ಲಿ ಮೂರು ಚಿರತೆಗಳು ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಕಡೂರು ಅರಣ್ಯ ವಲಯ ವ್ಯಾಪ್ತಿಯ ಶಿವಗಂಗಾ ಗಿರಿ ಬೆಟ್ಟದಲ್ಲಿ ಮೂರು ಚಿರತೆಗಳು ಡ್ರೋನ್ ಕ್ಯಾಮರದಲ್ಲಿ ಗಿರಿಯ ತುದಿಯಲ್ಲಿರುವ ಚಿರತೆಗಳು ಸೆರೆಯಾಗಿದ್ದು, ಶಿವಗಂಗಾ ಗಿರಿಯ ಕೆಳಗಿರುವ ದೇವಸ್ಥಾನದಲ್ಲಿ ಮದುವೆ ಕಾರ್ಯಕ್ರಮದ ಮದುವೆ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ವೇಳೆ ದ್ರೋಣ್ ಕ್ಯಾಮರಾದಲ್ಲಿ ಚಿರತೆಗಳು ಸೆರೆಯಾಗಿವೆ.

ಇನ್ನು ಡ್ರೋನ್ ಕ್ಯಾಮರವನ್ನು ಕಂಡ ಚಿರತೆಗಳು ಗಾಬರಿಗೊಂಡಿದ್ದು, ಚಿರತೆಗಳ ಚಲನವಲನ ಸೆರೆಯಾಗಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಕಾರ್ಮಿಕರು ಹೊಲಗಳಿಗೆ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.