Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮೈತ್ರಿ ಮುಟ್ಟಿನ ಕಪ್’ ರಾಯಭಾರಿಯಾಗಿ ಕಾಂತಾರ ಸಿನಿಮ ನಟಿ ಸಪ್ತಮಿ

 

ಮಂಗಳೂರು: ‘ಮೈತ್ರಿ ಮುಟ್ಟಿನ ಕಪ್’ ಯೋಜನೆಯ ರಾಯಭಾರಿಯಾಗಿ ಕಾಂತಾರ ಖ್ಯಾತಿಯ ನಟಿ ಸಪ್ತಮಿಗೌಡ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಯೋಜನೆಗೆ ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. ‘ರಾಯಭಾರಿಯಾಗಿ ನೇಮಕ ಮಾಡಿದ್ದಕ್ಕೆ ಆತ್ಮಸ್ಥೆರ್ಯ ಇಮ್ಮಡಿಗೊಳಿಸಿದೆ’ ಎಂದು ನಟಿ ಸಪ್ತಮಿಗೌಡ ತಿಳಿಸಿದ್ದಾರೆ.

ರಾಜ್ಯ ಸರ್ಕಾರ, 17 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಮುಟ್ಟಿನ ಕಪ್ ಉಚಿತವಾಗಿ ವಿತರಿಸಲು ಈ ಯೋಜನೆಯನ್ನು ಆರಂಭಿಸಿದೆ.