Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಯತ್ನಾಳ್ ಅವರಿಂದ ದೀಪಾವಳಿಗೆ ಪ್ರತಿ ಮನೆಗೂ 2 ಸಾವಿರ ಗಿಫ್ಟ್.!

 

ವಿಜಯಪುರ: ವಿಜಯಪುರದ BJP ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜಕೀಯವಾಗಿ ನಿರಂತರ ಸುದ್ದಿಯಲ್ಲಿರುತ್ತಾರೆ.

ಇದೀಗ ತಮ್ಮ ಕ್ಷೇತ್ರದ ಜನರಿಗೆ ದೀಪಾವಳಿ ಹಬ್ಬಕ್ಕೆ ಸಿಹಿ ನ್ಯೂಸ್ ಕೊಡುವ ಮೂಲಕ ವಿಭಿನ್ನವಾಗಿ ಸುದ್ದಿಯಾಗಿದ್ದಾರೆ. ಕ್ಷೇತ್ರದ 11 ಸಾವಿರ ಕುಟುಂಬಗಳ ಪ್ರತಿ ಮನೆಗೂ ತಲಾ 2 ಸಾವಿರ ಕೊಡುವುದಾಗಿ ಯತ್ನಾಳ್ ಘೋಷಿಸಿದ್ದಾರೆ.

ಇದಕ್ಕಾಗಿ 72.2 ಕೋಟಿ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಹಬ್ಬಕ್ಕೆ ಕೊಡಲಾಗುವ 2 ಸಾವಿರ ಸುದ್ದಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ.