Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವಿಮಾನದಲ್ಲಿ ತಾಂತ್ರಿಕ ದೋಷ – ದೆಹಲಿಯಲ್ಲೇ ಉಳಿದ ಕೆನಡಾ ಪ್ರಧಾನಿ

ನವದೆಹಲಿ: ಭಾರತಕ್ಕೆ ಜಿ20 ಶೃಂಗಸಭೆಗಾಗಿ ಬಂದಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಅವರ ತಂಡ ಸಭೆ ಮುಗಿಸಿ ಭಾನುವಾರ ಹಿಂತಿರುಗುತ್ತಿದ್ದಾಗ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಕೆನಡಾ ಪ್ರಧಾನಿ ದೆಹಲಿಯಲ್ಲೇ ಉಳಿದುಕೊಂಡಿದ್ದಾರೆ.

ದೆಹಲಿಯಿಂದ ರಾತ್ರಿ ಸುಮಾರು ಎಂಟು ಗಂಟೆಗೆ ವಿಮಾನ ಹೋರಾಡಬೇಕಿತ್ತು ಅಷ್ಟೋತ್ತಿಗಾಗಲೇ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದೆ.

ಇನ್ನು ತಾಂತ್ರಿಕ ಸಮಸ್ಯೆಯನ್ನು ರಾತ್ರೋರಾತ್ರಿ ಸರಿಪಡಿಸಲು ಸಾಧ್ಯವಿಲ್ಲ. ಹಾಗಾಗಿ ಪರ್ಯಾಯ ವ್ಯವಸ್ಥೆ ಮಾಡುವವರೆಗೂ ಎಲ್ಲರೂ ದೆಹಲಿಯಲ್ಲೇ ಜಸ್ಟಿನ್ ಟ್ರುಡೊ ಅವರು ಉಳಿಯುವಂತಾಗಿತ್ತು.