ಸಫಾರಿ ವಾಹನದ ಆನೆ ದಾಳಿ
![](https://suddimane.com/wp-content/uploads/2023/09/WhatsApp-Image-2023-09-11-at-12.15.24-PM.jpeg)
ಮೈಸೂರು: ಸಫಾರಿ ವಾಹನಗಳ ಮೇಲೆ ಆನೆ ದಾಳಿ ನಡೆಸಲು ಮುಂದಾದ ಘಟನೆ ನಾಗರಹೊಳೆ ಅರಣ್ಯದಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ನಾಗರಹೊಳೆ ಅರಣ್ಯ ಪ್ರದೇಶದ ಕುಟ್ಟ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಸಫಾರಿಗೆ ತೆರಳಿದ್ದ ಪ್ರವಾಸಿಗರ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.
ಮೊದಲಿಗೆ ಖಾಸಗಿ ವಾಹನ ನೋಡಿ ಓಡಿ ಬಂದ ಆನೆ ಬಳಿಕ ಸಫಾರಿ ವಾಹನದ ಮೇಲೆ ದಾಳಿ ನಡಸಲು ಮುಂದಾಯಿತು. ಬಳಿಕ ಎದುರಿನಲ್ಲಿ ಮತ್ತೊಂದು ಸಫಾರಿ ವಾಹನದ ಬಳಿಗೂ ಬಂದ ಆನೆ ಓಡಿ ಹೋಗಿದೆ. ವಾಹನ ಹಿಮ್ಮುಖವಾಗಿ ಚಲಿಸಿದ ಬಳಿಕ ಆನೆ ವಾಪಸ್ ಹೋಗಿದೆ ಎನ್ನಲಾಗಿದೆ.