Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

— -ಸಿದ್ಧಾಂತಿ ವೀರಸಂಗಯ್ಯ  ಅವರ ವಚನ .

 

 

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.

 

ವಚನ: :

ದ್ವೈತಾದ್ವೈತಂಗಳೆಂದು ಸಂಬಂಧಿಸಿ ನುಡಿವಲ್ಲಿ,

ದ್ವೈತವೆರಡು ಅದ್ವೈತ ಒಂದೆ, ದ್ವೈತ ಉಂಟು ಅದ್ವೈತವಿಲ್ಲ.

ಅದು ಒಂದರಲ್ಲಿ ಹುಟ್ಟಿ ಕುರುಹಿಡುವನ್ನಕ್ಕರ,

ಸಿದ್ಧಾಂತವಲ್ಲ, ಪ್ರಸಿದ್ಧಾಂತವಲ್ಲ.

ಅದ ನಿನ್ನ ನೀ ತಿಳಿ, ಅದು ನಿನಗನ್ಯಭಿನ್ನವಲ್ಲ.ಗೋಳಕಾಕಾರ ವಿಶ್ವವಿರಹಿತಲಿಂಗವು ತಾನು ತಾನೆ.

 

-ಸಿದ್ಧಾಂತಿ ವೀರಸಂಗಯ್ಯ