Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಹಣ ಅಕ್ರಮ ವರ್ಗಾವಣೆ -ನರೇಶ್ ಗೋಯಲ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಮುಂಬೈ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಇನ್ನಷ್ಟು 14 ದಿನಗಳ ಕಾಲ ವಿಸ್ತರಿಸಲಾಗಿದೆ.

ಸೆ. 14 ರಂದು ಅವರ ಕಸ್ಟಡಿ ಅವಧಿ ಮುಗಿಯಬೇಕಿತ್ತು. ನಿನ್ನೆ ಮುಂಬೈ ಕೋರ್ಟ್​ವೊಂದಕ್ಕೆ ಗೋಯಲ್ ಅವರನ್ನು ಹಾಜರುಪಡಿಸಿದ ಜಾರಿ ನಿರ್ದೇಶನಾಲಯ, ಕಸ್ಟಡಿ ಅವಧಿಯನ್ನು ವಿಸ್ತರಿಸಬೇಕೆಂದು ಕೋರಿತು. ಇದಕ್ಕೆ ನ್ಯಾಯಾಲಯ ಸಮ್ಮತಿಸಿದೆ. 74 ವರ್ಷದ ನರೇಶ್ ಗೋಯಲ್ ಅವರು ಸೆಪ್ಟೆಂಬರ್ 28ರವರೆಗೂ ಜುಡಿಷಿಯಲ್ ಕಸ್ಟಡಿಯಲ್ಲಿ ಮುಂದುವರಿಯಲಿದ್ದಾರೆ.

ಇನ್ನು ತಮ್ಮ ಬ್ಯಾಂಕ್​ನಿಂದ ವಿವಿಧ ಅವಧಿಯಲ್ಲಿ, ವಿವಿಧ ಕಾರಣಗಳಿಗೆ ಪಡೆದಿದ್ದ 848.86 ಕೋಟಿ ರೂ ಮೊತ್ತದ ಸಾಲದಲ್ಲಿ 538.62 ಕೋಟಿ ರೂ ಹಣವನ್ನು ಜೆಟ್ ಏರ್ವೇಸ್ ಮರುಪಾವತಿಸದೇ ಬಾಕಿ ಉಳಿಸಿದೆ ಎಂದು ಕೆನರಾ ಬ್ಯಾಂಕ್ ದೂರು ನೀಡಿದ್ದು, ಆ ಸಂಬಂಧ ಎಫ್​ಐಆರ್ ದಾಖಲಾಗಿತ್ತು.