Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಆನೆ ಅರ್ಜುನ ಸಾವು.. ಸರ್ಕಾರದಿಂದ ಮಹತ್ವದ ಘೋಷಣೆ!

 

ಬೆಳಗಾಂ : 8 ಬಾರಿ ದಸರಾ ಅಂಬಾರಿಯನ್ನು ಹೊತ್ತಿದ್ದ ಅರ್ಜುನ ಆನೆ ನಿನ್ನೆ ಕಾಡಾನೆ ಜೊತೆ ಕಾಳಗದಲ್ಲಿ ಮೃತಪಟ್ಟಿದೆ. ಅದರಂತೆ ಪ್ರಸಿದ್ದಿ ಪಡೆದಿರುವ ಅರ್ಜುನ ಅಂತ್ಯಕ್ರಿಯೆಯು ವಿಧಿವಿಧಾನಗಳಂತೆ ನೆರವೇರಿಸಲಾಗಿದೆ.

ಅರ್ಜುನನಿಗೆ ಗೌರವ ಸಲ್ಲಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅರಣ್ಯ ಸಚಿವ ಈಶ್ವ‌ರ್ ಖಂಡ್ರೆ, ಅರ್ಜುನನ್ನು ಗೌರವಿಸಲು ಮೈಸೂರು ಹಾಗೂ ಹಾಸನ ಜಿಲ್ಲೆಯಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದ್ದಾರೆ.