Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಆರ್​ಬಿಐನ ಮಾಜಿ ಗವರ್ನರ್ ವೆಂಕಟರಾಮನ್ ನಿಧನ

ಚೆನ್ನೈ: ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್​ಬಿಐ)ನ ಮಾಜಿ ಗವರ್ನರ್ ಎಸ್​.ವೆಂಕಟರಾಮನ್ ಶನಿವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಎಸ್​.ವೆಂಕಟರಾಮನ್ ಅವರಿಗೆ 92 ವರ್ಷ ವಯಸ್ಸಾಗಿತ್ತು. ವೆಂಕಟರಾಮನ್ ಅವರು ಭಾರತೀಯ ಆಡಳಿತ ಸೇವೆ (ಐಎಎಸ್​)ಯ ಅಧಿಕಾರಿಯಾಗಿದ್ದರು. ಆರ್‌ಬಿಐ ಗವರ್ನರ್ ಹುದ್ದೆ ವಹಿಸಿಕೊಳ್ಳುವ ಮುನ್ನ ಅವರು ಹಣಕಾಸು ಕಾರ್ಯದರ್ಶಿಯಾಗಿ ಮತ್ತು ಬಳಿಕ ಕರ್ನಾಟಕ ಸರ್ಕಾರದ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. 1990ರ ಡಿಸೆಂಬರ್​ನಿಂದ 1992ರ ಡಿಸೆಂಬರ್​ವರೆಗೆ ಆರ್‌ಬಿಐಯಲ್ಲಿ ವೆಂಕಟರಾಮನ್ ಸೇವೆ ಸಲ್ಲಿಸಿದ್ದರು.