Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇನ್ನು ಸಹಿಸಲು ಸಾಧ್ಯವಿಲ್ಲ…ಸುಚನಾ ಸೇಠ್ ಐಲೈನರ್‌ನಿಂದ ಬರೆದಿರುವ ಕೈಬರಹ ಪತ್ತೆ

ಪಣಜಿ: ದತ್ತಾಂಶ ವಿಜ್ಞಾನಿ ಮತ್ತು ಸ್ಟಾರ್ಟ್‌ಅಪ್ ಸಂಸ್ಥಾಪಕಿ ಸುಚನಾ ಸೇಠ್ ಅವರು ತಮ್ಮ ಹತ್ಯೆಗೀಡಾದ ನಾಲ್ಕು ವರ್ಷದ ಮಗನ ಶವವನ್ನು ಹೊಂದಿರುವ ಸೂಟ್‌ಕೇಸ್‌ನೊಳಗೆ ಇನ್ನು ಸಹಿಸಲು ಸಾಧ್ಯವಿಲ್ಲ… ಐಲೈನರ್‌ನಿಂದ ಬರೆದಿರುವ ಆರು ಸಾಲಿನ ಕೈಬರಹ ಪತ್ತೆಯಾಗಿದೆ. ಇದು ಆಕೆಯ ಮನಸ್ಥಿತಿಯನ್ನು ಸೂಚಿಸುತ್ತದೆ ಮತ್ತು ಹತ್ಯೆಗೆ ಸಂಭವನೀಯ ಉದ್ದೇಶವಿತ್ತು ಎಂದು ಪೊಲೀಸರು ಗುರುವಾರ ಮಾಹಿತಿ ನೀಡಿದ್ದಾರೆ.

“ನ್ಯಾಯಾಲಯ ಮತ್ತು ನನ್ನ (ವಿಚ್ಛೇದಿತ) ಪತಿ ನನ್ನ ಮಗನನ್ನು ಕಸ್ಟಡಿಗೆ ನೀಡುವಂತೆ ಒತ್ತಡ ಹೇರುತ್ತಿದ್ದರು. ನಾನು ಅದನ್ನು ಇನ್ನು ಮುಂದೆ ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದು ಐಲೈನರ್‌ನೊಂದಿಗೆ ಬರೆದ ಟಿಪ್ಪಣಿಯಲ್ಲಿ ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ನನ್ನ ಮಾಜಿ ಪತಿ ಹಿಂಸಾತ್ಮಕ … ಅವರು ಕೆಟ್ಟ ನಡವಳಿಕೆಯನ್ನು ಕಲಿಸುತ್ತಿದ್ದರು .ತಂದೆಗೆ ಒಂದು ದಿನದ ಕಸ್ಟಡಿಗೆ ಕೊಡಲು ನನಗೆ ಇಷ್ಟವಿರಲಿಲ್ಲ. ಸುಚನಾ ಮಗುವನ್ನು ಕೊಲೆ ಮಾಡುವ ಮೊದಲು ಮಗುವನ್ನು ಮಲಗಿಸುವ ಪ್ರಯತ್ನದಲ್ಲಿ ತನ್ನ ಮಗನಿಗೆ “ಲಾಲಿ ಹಾಡಿದ್ದಾರೆ” ಎಂದು ತನಿಖಾಧಿಕಾರಿ ಹೇಳಿದ್ದಾರೆ.

ಅವಳ ಮಗನ ಪಾಲನೆಯ ವಿಷಯವು ಅನೇಕ ದಿನಗಳಿಂದ ಅವಳ ಮನಸ್ಸಿನಲ್ಲಿ ಇತ್ತು. ಇದು ತೀವ್ರವಾಗಿ ಪ್ರಚೋದಿಸಿತು ಎಂದು ಹೇಳಲಾಗಿದೆ. ಸದ್ಯ ಈಗ ಪೊಲೀಸರು ಕೈಬರಹ ಟಿಪ್ಪಣಿಯನ್ನು ವಿಧಿವಿಜ್ಞಾನ ಪರಿಶೀಲನೆಗೆ ಕಳುಹಿಸಲಾಗಿದೆ.

“ಅವಳು ತನ್ನ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದಳು, ಅಪರಾಧ ಮಾಡುವ ಮೊದಲು ಸೂಚಾನ ಅವರ ಕರೆ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ . ಮಗು ಸಾವಿನ ನಂತರ ಅವಳು ಯಾರಿಗೆ ಕರೆ ಮಾಡಿದಳು ಎಂದು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಹೋಟೆಲ್ ಸೋಲ್ ಬನಿಯನ್ ಗ್ರಾಂಡೆಯ 404 ಕೊಠಡಿ ಅಲ್ಲಿ ಸುಚನಾ ತನ್ನ ಮಗನನ್ನು ಕೊಚ್ಚಿ ಕೊಲೆ ಮಾಡಿದ್ದಾಳೆ. ಮತ್ತು ಶಂಕಿತ ಆತ್ಮಹತ್ಯೆ ಪ್ರಯತ್ನದಲ್ಲಿ ಅವಳ ಮಣಿಗಟ್ಟನ್ನುಕೊಯೈದು ಕೊಂಡಿದ್ದಾಳೆ. ಅಲ್ಲದೇ ಕೋಣೆಯಲ್ಲಿ ಕೆಮ್ಮಿನ ಸಿರಪ್‌ನ ಎರಡು ಖಾಲಿ ಬಾಟಲಿಗಳು ಪತ್ತೆಯಾಗಿದ್ದು, ಆಕೆ ತನ್ನ ಮಗನಿಗೆ ಅಮಲೇರಿಸಲು ಯತ್ನಿಸಿದ್ದಾಳೆಂದು ಪೊಲೀಸ್‌ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.