Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಈಗಲೇ ಜಾಗ ಖಾಲಿ ಮಾಡಿ – ಹಮಾಸ್ ಉಗ್ರರಿಗೆ ಇಸ್ರೇಲ್‌ ಪ್ರಧಾನಿ ಎಚ್ಚರಿಕೆ..!

ಜೆರುಸಲೇಂ: ಇಸ್ರೇಲ್‌ಅನ್ನು ಆಕ್ರಮಿಸಿರುವ ಹಮಾಸ್ ಉಗ್ರರು ಕೂಡಲೇ ತಾವಿರುವ ಪ್ರದೇಶವನ್ನು ತೊರೆಯಬೇಕೆಂದು ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಬರೆದುಕೊಂಡಿರುವ ಅವರು, ಹಮಾಸ್ ಉಗ್ರರ ಅಡಗುತಾಣಳನ್ನು ನಾವು ಸದ್ಯದರಲ್ಲೇ ಅವಶೇಷಗಳನ್ನಾಗಿ ಪರಿವರ್ತಿಸಲಿದ್ದೇವೆ. ಗಾಜಾ ನಿವಾಸಿಗಳಿಗೆ ಹೇಳುತ್ತಿದ್ದೇನೆ ಕೂಡಲೇ ನಿಮ್ಮ ಅಡಗುತಾಣಗಳಿಂದ ಹೊರಟು ಹೋಗಿ. ಯಾಕೆಂದರೆ ಅಲ್ಲಿ ನಾವು ತೀವ್ರವಾಗಿ ಕಾರ್ಯಾಚರಿಸಲಿದ್ದೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಈ ಕಠಿಣ ಪರಿಸ್ಥಿತಿಯಲ್ಲಿ ಇಸ್ರೇಲ್‌ನ ನಾಗರಿಕರೊಂದಿಗೆ ನಾವು ಒಟ್ಟಾಗಿ ನಿಲ್ಲುತ್ತೇವೆ. ಈ ಯುದ್ಧವು ಬಹಳಷ್ಟು ಸಮಯ ತೆಗೆದುಕೊಳ್ಳಲಿದ್ದು, ಕಠಿಣವಾಗಿರಲಿದೆ. ಸವಾಲಿನ ದಿನಗಳು ನಮ್ಮ ಮುಂದಿವೆ. ದೇವರ ಅನುಗ್ರಹದಿಂದ ಯುದ್ಧದಲ್ಲಿ ನಾವು ಗೆಲ್ಲುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ಬೆಂಜಮಿನ್‌ ನೆತನ್ಯಾಹು ತಿಳಿಸಿದ್ದಾರೆ.