Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಉಪವಾಸದ ಸಮಯದಲ್ಲಿ ಈ ಹಣ್ಣುಗಳು ತಕ್ಷಣವೇ ಶಕ್ತಿ ನೀಡುತ್ತವೆ

ಇಂದು ಮಹಾಶಿವರಾತ್ರಿ. ಇವತ್ತಿನ ದಿನ ಸಾಮಾನ್ಯವಾಗಿ ಉಪವಾಸ ಇರುತ್ತಾರೆ. ಉಪವಾಸವಿದ್ದು ಶಿವನ ಆರಾಧನೆಯನ್ನು ಮಾಡುತ್ತಾರೆ.

ಕೆಲವರು ಉಪವಾಸವಿದ್ದುಕೊಂಡೇ ಜಾಗರಣೆ ಕೂಡ ಮಾಡುವ ಪದ್ಧತಿಯನ್ನು ನಾವು ಕಾಣುತ್ತೇವೆ.

ಈ ಸಮಯದಲ್ಲಿ ದಿನಪೂರ್ತಿ ಏನೂ ತಿನ್ನದೇ ಇರುವುದು ಸ್ವಲ್ಪ ಕಷ್ಟ ಎನ್ನಿಸುತ್ತದೆ. ಆದರೆ ಈ ಸಮಯದಲ್ಲಿ ದೇಹಕ್ಕೆ ಶಕ್ತಿ ನೀಡುವ ಕೆಲವು ಆಹಾರಗಳನ್ನು ಸೇವಿಸಬಹುದು.
ಉಪವಾಸದ ಸಮಯದಲ್ಲಿ ಬಾಳೆಹಣ್ಣು, ಕಿತ್ತಳೆ ಮತ್ತು ಬೆರ್ರಿ ಹಣ್ಣುಗಳನ್ನು ಸೇವನೆ ಮಾಡಿದರೆ ಇವು ದೇಹಕ್ಕೆ ತಕ್ಷಣವೇ ಶಕ್ತಿಯನ್ನು ನೀಡುತ್ತವೆ.