Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಒಂದೇ ಕುಟುಂಬದ ಮೂವರ ಗುಂಡಿಕ್ಕಿ ಹತ್ಯೆ – ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಲಕ್ನೋ: ಒಂದೇ ಕುಟುಂಬದ ಮೂವರನ್ನು ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗಲಭೆಯಲ್ಲಿ ಗುಂಡಿಕ್ಕಿ ಹತ್ಯೆಮಾಡಿರುವ ಘಟನೆ ಉತ್ತರ ಪ್ರದೇಶದ ಲಕ್ನೋದ ಮಹಿಲಾಬಾದ್‌ನ ಮೊಹಮ್ಮದ್ ನಗರದಲ್ಲಿ ನಡೆದಿದೆ.

ಮೃತರನ್ನು ಮುನೀರ್ ಅಹ್ಮದ್ ಖಾನ್, ಆತನ ಸೋದರಳಿಯ ಹಂಝಲಾ ಖಾನ್ (17) ಮತ್ತು ಹಂಝಾಳ ತಾಯಿ ಫರ್ಹೀನ್ ಎಂದು ಗುರುತಿಸಲಾಗಿದೆ.

ಜಮೀನು ವಿವಾದಕ್ಕೆ ಸಂಬಂಧಿಸಿ ಎರಡು ಕುಟುಂಬಗಳ ನಡುವೆ ಬಹಳ ದಿನಗಳಿಂದ ಜಗಳಗಳು ನಡೆದಿದ್ದು, ಈ ವಿವಾದ ನ್ಯಾಯಾಲಯದಲ್ಲೂ ವಜಾ ಗೊಂಡಿತ್ತು. ಇದರ ನಡುವೆ ಪೊಲೀಸರಿಗೆ ಮಾಹಿತಿ ನೀಡದೆ ಜಮೀನು ಅಳತೆ ಮಾಡಲು ಲೆಕ್ಕಾಧಿಕಾರಿಯನ್ನು ಕರೆಸಿ ಜಮೀನು ಅಳತೆ ಮಾಡುತ್ತಿದ್ದರು. ಈ ವೇಳೆ ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆದಿದೆ. ಇದಾದ ಬಳಿಕ ಕುಟುಂಬ ಸದಸ್ಯರು ಮನೆಗೆ ತೆರಳಿದ್ದಾರೆ ಅಲ್ಲಿಗೆ ಬಂದ ಒಂದು ಕುಟುಂಬ ಮತ್ತೆ ವಾಗ್ವಾದ ನಡೆಸಿದೆ ಇದು ಉಲ್ಬಣಗೊಂಡು ಸಿರಾಜ್ ಅಹ್ಮದ್ ಖಾನ್ ಅಲಿಯಾಸ್ ಲಲ್ಲನ್ ತನ್ನ ಪರವಾನಗಿ ಪಡೆದ ರೈಫಲ್‌ನಿಂದ ಮುನೀರ್, ಹಂಝಲಾ ಮತ್ತು ಫರ್ಹೀನ್‌ಗೆ ಗುಂಡು ಹಾರಿಸಿದ್ದಾನೆ ಎಂದು ಲಕ್ನೋ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಇನ್ನು ಆರೋಪಿ ವಿರುದ್ಧ ಮಹಿಲಾಬಾದ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ.