Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಓಡಿಹೋಗಿ ಮದುವೆಯಾದ ಮೂರೇ ದಿನಕ್ಕೆ ನವದಂಪತಿ ಮರ್ಡರ್‌..!

ಚೆನ್ನೈ: ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ಈ ಜೋಡಿಯನ್ನು ಭೀಕರವಾಗಿ ಹತ್ಯೆಗೈದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಮಾರಿ ಸೆಲ್ವಂ(24) , ಕಾರ್ತಿಕಾ(20) ಹತ್ಯೆಯಾದ ದಂಪತಿ. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರ ಪ್ರೀತಿಗೆ ಎರಡೂ ಮನೆಯವರ ವಿರೋಧ ಇತ್ತು. ಮನೆಯವರ ವಿರೋಧದ ನಡುವೆಯೂ ಅಕ್ಟೋಬರ್ 31 ರಂದು ಸೆಲ್ವಂ ಹಾಗೂ ಕಾರ್ತಿಕಾ ಅವರು ಓಡಿಹೋಗಿ ಮದುವೆಯಾಗಿದ್ದರು. ಮದುವೆಯ ಬಳಿಕ ನವದಂಪತಿ ಮುರುಗೇಶನ್ ನಗರದಲ್ಲಿ ವಾಸಿಸುತ್ತಿದ್ದರು. ಮದುವೆಯಾಗಿ ಮೂರು ದಿನಗಳು ಕಳೆದಿದೆ. ಗುರುವಾರ(ನ.2 ರಂದು) ಸಂಜೆ 6 ಮಂದಿಯ ಗುಂಪೊಂದು ಬೈಕ್‌ನಲ್ಲಿ ಬಂದು ದಂಪತಿಯಿದ್ದ ಮನೆಗೆ ನುಗ್ಗಿ ಹಲ್ಲೆಗೈದು, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.