Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನೇಪಾಳದ ಕಠ್ಮಂಡು ಹಾಗೂ ಹಲವು ಪ್ರದೇಶದಲ್ಲಿ ಭೀಕರ ಭೂಕಂಪ: 128 ಮಂದಿ ಸಾವು

ನೇಪಾಳ: ನೇಪಾಳದ ಕಠ್ಮಂಡು ಹಲವೆಡೆ ಭೀಕರ ಭೂಕಂಪ ಉಂಟಾಗಿದ್ದು 128 ಮಂದಿ ಮೃತಪಟ್ಟಿದ್ದಾರೆ.

ಭೂಕಂಪದ ಕೇಂದ್ರ ಬಿಂದು ನೇಪಾಳದ ಜಜರ್ಕೋಟ್ ಜಿಲ್ಲೆಯ ಲಾಮಿಡಾಂಡಾ ಪ್ರದೇಶದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದ ಅಧಿಕಾರಿಗಳ ಹೇಳಿದ್ದಾರೆ

ನೇಪಾಳ ಮಾತ್ರವಲ್ಲದೇ ದೆಹಲಿ-ಎನ್‌ಸಿಆರ್ ಪ್ರದೇಶ, ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಹಲವೆಡೆ ಕಂಪನದ ಅನುಭವವಾಗಿದೆ.

ಜಜರ್ಕೋಟ್​​​​​​ನಲ್ಲಿ ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದು, ಜಜರ್ಕೋಟ್​​​​​​ ಡೆಪ್ಯುಟಿ ಮೇಯರ್ ಕೂಡ ಮೃತಪಟ್ಟಿದ್ದಾರೆ. ಪಶ್ಚಿಮ ರುಕುಂ ಜಿಲ್ಲೆಯಲ್ಲಿ 36 ಜನ, ಜಾಜರಕೋಟ್​ನಲ್ಲಿ 34 ಜನ ಸಾವನ್ನಪ್ಪಿದ್ದು, ಒಟ್ಟಾರೆಯಾಗಿ 129 ಮಂದಿಯನ್ನು ಭೂಕಂಪವು ಬಲಿ ಪಡೆದುಕೊಂಡಿದೆ.