Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪೊಲೀಸರಿಗೆ ಗುಡ್ ನ್ಯೂಸ್.! 6ನೇ ವೇತನ ಆಯೋಗ ಜಾರಿ.!

 

ಗದಗ: ಗೃಹ ಸಚಿವ ಜಿ.ಪರಮೇಶ್ವರ್‌ ಅವರು ರಾಜ್ಯ ಪೊಲೀಸರಿಗೆ ಶಿಘ್ರದಲ್ಲಿಯೇ 6ನೇ ವೇತನ ಆಯೋಗ ಜಾರಿ ಆಗಲಿದೆ ಅಂತ ತಿಳಿಸಿದ್ದಾರೆ.

ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದ ಅವರು ಪೊಲೀಸ್ ಸಿಬ್ಬಂದಿಗೆ ಅದಕ್ಕೆ ಸರಿಸಮಾನ ವೇತನ, ಭತ್ಯೆ ಸರಿಯಾಗಿ ಸಿಕ್ಕಿಲ್ಲ. ಅದನ್ನು ಆದಷ್ಟು ಬೇಗ ಪರಿಶೀಲನೆ ಮಾಡಿ ಸಮಸ್ಯೆ ಪರಿಹರಿಸುತ್ತೇವೆ ಎಂದರು.

ಇನ್ನೂ ಪೊಲೀಸರಿಗೆ ಬಡ್ತಿ ವಿಚಾರವಾಗಿ ಕೆಲ ನಿಯಮಗಳನ್ನು ಬದಲಾವಣೆ ಮಾಡ ಬೇಕಾಗಿದೆ. ವಿಶೇಷವಾಗಿ ಅಂತ‌ ವಲಯ ವರ್ಗಾವಣೆ ಯಿಂದ ಹಿರಿಯ ಅಧಿಕಾರಿಗಳಿಗೆ ಬಡ್ತಿ ಸಮಸ್ಯೆಯಾಗಿದ್ದು, ಅದನ್ನು ಶೀಘ್ರವೇ ಪರಿಹರಿಸಲಾಗುವುದು. ತಿಂಗಳಲ್ಲಿ 600 ಪಿಎಸ್ ಐಗಳಿಗೆ ಬಡ್ತಿ ನೀಡಲಾಗುವುದು ಅಂತ ಹೇಳಿದರು.