Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಫೆ.26ರಿಂದ 2ದಿನ ಬೆಂಗಳೂರಿನಲ್ಲಿ ಉದ್ಯೋಗ ಮೇಳ

ರಾಜ್ಯ ಸರ್ಕಾರವು ಫೆ 26 ರಿಂದ 2 ದಿನ ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್‌ ಉದ್ಯೋಗ ಮೇಳ ‘ಯುವ ಸಮೃದ್ಧಿ ಸಮ್ಮೇಳನ’ವನ್ನು ಆಯೋಜಿಸಿದೆ.

ಈ ಉದ್ಯೋಗ ಮೇಳದಲ್ಲಿ 500 ಕ್ಕೂ ಹೆಚ್ಚು ಸಂಸ್ಥೆಗಳು ಅಥವಾ ಕಂಪನಿಗಳು ಭಾಗವಹಿಸಲಿದ್ದು, ಈವರೆಗೆ 31,000 ಮಂದಿ ಉದ್ಯೋಗ ಹುಡುಕುತ್ತಿರುವವರು ನೋಂದಾಯಿಸಿಕೊಂಡಿದ್ದಾರೆ. ಅರಮನೆ ಮೈದಾನದಲ್ಲಿ ನಡೆಯಲಿರುವ ಈ ಉದ್ಯೋಗ ಮೇಳವನ್ನು
CM ಸಿದ್ದರಾಮಯ್ಯ  DCM ಡಿ.ಕೆ.ಶಿವಕುಮಾರ್‌ ಉದ್ಭಾಟಿಸಲಿದ್ದಾರೆ.

ರಾಜ್ಯದಾದ್ಯಂತ 31,000ಕ್ಕೂ ಹೆಚ್ಚು ಅಭ್ಯರ್ಥಿಗಳು ಈಗಾಗಲೇ ಉದ್ಯೋಗ ಮೇಳಕ್ಕಾಗಿ Online ನೋಂದಾಯಿಸಿಕೊಂಡಿದ್ದಾರೆ.