Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಾಲಾಪರಾಧಿ ಗೃಹದ ಕಿಟಕಿ ಒಡೆದು 22 ಕ್ರಿಮಿನಲ್ ಗಳು ಪರಾರಿ

ಜೈಪುರದಲ್ಲಿ ಬಾಲಾಪರಾಧಿ ಗೃಹದಿಂದ 22 ಕ್ರಿಮಿನಲ್‌ಗಳು ಪರಾರಿಯಾಗಿರುವ ಘಟನೆ ವರದಿಯಾಗಿದೆ. 22 ಮಕ್ಕಳ ಪೈಕಿ
13 ಜನರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿವೆ.

ಬೆಳಗಿನ ಜಾವ 4-5 ಗಂಟೆ ವೇಳೆಗೆ ಕಿಟಕಿ ಒಡೆದು ಪರಾರಿಯಾಗಿದ್ದಾರೆ. ವಿಷಯ ತಿಳಿದ ಕೂಡಲೇ ಜೈಲು ಆಡಳಿತ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪ್ರಕರಣ ದಾಖಲಿಸಿಕೊಂಡು ಎಲ್ಲರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಪ್ರತಿಯೊಬ್ಬರ ವಯಸ್ಸು 12-16 ವರ್ಷಗಳು ಎಂದು ಹೇಳಲಾಗುತ್ತದೆ. ಮಕ್ಕಳ ಪತ್ತೆಗೆ ತಂಡ ರಚಿಸಲಾಗಿದೆ. ಈ ಮಕ್ಕಳು ಸುಮಾರು 2 ವರ್ಷಗಳಿಂದ ಬಾಲಾಪರಾಧಿ ಗೃಹದಲ್ಲಿ ವಾಸಿಸುತ್ತಿದ್ದರು.