Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇನ್ನೂ ಮಗು.! ಸಚಿವ ಚಲುವರಾಯಸ್ವಾಮಿ ಕುಹಕ.!

 

ಬೆಂಗಳೂರು: ವಿಜಯೇಂದ್ರ ಇನ್ನೂ ಮಗು, ಅವನಿಗೇನು ಗೊತ್ತು? ನಾನು ಹಳ್ಳಿಯಿಂದ ಬಂದವನು, ಮಾತನಾಡಲು ಬರುತ್ತೆ. ಪಕ್ಷದ ಒಳಗಿನ ಮುನಿಸು ಹೆಚ್ಚು ಪ್ರಚಾರ ಮಾಡದಂತೆ ನಿಮ್ಮನ್ನು(ಮಾಧ್ಯಮ) ತಡೆಯಲು ಹೇಳಿಕೆ ನೀಡುತ್ತಿದ್ದಾರೆ’ ಎಂದು ಸಚಿವ ಚಲುವರಾಯಸ್ವಾಮಿ ಕುಹಕವಾಡಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ BY ವಿಜಯೇಂದ್ರ ಕಲಬುರಗಿಯ ಹಲ್ಲೆ ಘಟನೆ ಕುರಿತು ನೀಡಿದ್ದ ‘ಗುಂಡಾಗರ್ಧಿಗಳಿಗೂ ಇವರಿಗೂ ಏನು ವ್ಯತ್ಯಾಸ ಇಲ್ಲ. ಮುಂದೆ ಇದು ರಾಜ್ಯಕ್ಕೆ ಹಬ್ಬುತ್ತದೆ’ ಎಂಬ ಹೇಳಿಕೆಗೆ ಸಚಿವರ ಪ್ರತಿಕ್ರಿಯೆ ಇದು.