Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬೆಂಗಳೂರಿನಲ್ಲಿ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ ಆರಂಭ

ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟಿನ ಕಾರಣ ದೊಡ್ಡ ಪ್ರಮಾಣದ ನೀರು ಬಳಕೆದಾರರು ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ ಕಡ್ಡಾಯಗೊಳಿಸಿರುವ BWSSB ಇಂದಿನಿಂದ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಿದೆ.

ನಗರದ ಕಟ್ಟಡ, ವಾಣಿಜ್ಯ ಸಂಸ್ಥೆ, ರೆಸ್ಟೊರೆಂಟ್‌, ಐಷಾರಾಮಿ ಹೋಟೆಲ್‌, ಕೈಗಾರಿಕೆ ಮತ್ತು ಇತರ ಸಾರ್ವಜನಿಕ ಪ್ರದೇಶಗಳಲ್ಲಿ ನೀರನ್ನು ಸಂರಕ್ಷಿಸುವ ಉದ್ದೇಶದಿಂದ ಏರಿಯೇಟರ್‌ ಅಳವಡಿಕೆ ಆರಂಭಿಸಲಾಗಿದೆ.

ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾರ್ಚ್‌ 31ರ ಗಡುವನ್ನೂ ವಿಧಿಸಿದೆ.