Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭದ್ರಾ ಅಚ್ಚುಕಟ್ಟು ರೈತರ ಗಮನಕ್ಕೆ.! ನಾಲೆಗಳಿಗೆ ನೀರು ನಿಲ್ಲಿಸುವ ಸಮಯ ಮುಂದೂಡಿಕೆ

 

ದಾವಣಗೆರೆ; ಪ್ರಸಕ್ತ ಸಾಲಿನ ಭದ್ರಾ ಯೋಜನೆಯ ಮುಂಗಾರು ಬೆಳೆಗಾಗಿ ಭದ್ರಾ ಎಡದಂಡೆ ಮತ್ತು ಬಲದಂಡೆ ನಾಲೆಗಳಲ್ಲಿ ಹರಿಸಲಾಗುತ್ತಿರುವ ನೀರು.

ನ. 17 ರಂದು ಸ್ಥಗಿತಗೊಳಿಸಬೇಕಾಗಿದ್ದು, ನೀರು ನಿಲ್ಲಿಸುವ ಸಮಯವನ್ನು ನ.22 ರ ರಾತ್ರಿಯವರೆಗೆ ಮುಂದೂಡಲಾಗಿದೆ ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಅಧೀಕ್ಷಕ ಇಂಜಿನಿಯರ್ ಎನ್.ಸುಜಾತ ತಿಳಿಸಿದ್ದಾರೆ.