Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭೂಮಿಯ ಕೊನೆ ಕಕ್ಷೆಯಲ್ಲಿ ಚಂದ್ರಯಾನ-3 ಗಗನನೌಕೆ

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 3 ಗಗನನೌಕೆ ಇಂದು ಭೂಮಿ ಕೊನೆಯ ಕಕ್ಷೆಯನ್ನು ಪ್ರವೇಶಿಸಲಿದೆ. ಮಧ್ಯಾಹ್ನ 2-3 ಗಂಟೆಗೆ 5ನೇ ಅರ್ಥ್‌-bound perigee firing ಪೂರ್ಣಗೊಳ್ಳಲಿದ್ದು ನಂತರ ಜು.31ರ ರಾತ್ರಿ ಭೂಮಿ ಕಕ್ಷೆಯನ್ನು ತೊರೆದು ನೌಕೆ ಚಂದ್ರನ ಕಡೆಗೆ ಚಲಿಸುತ್ತದೆ.

ಪ್ರಸ್ತುತ, ಗಗನನೌಕೆ ಭೂಮಿಯಿಂದ 71,351 ಕಿಮೀ x 233 ಕಿಮೀ ದೂರದ ಕಕ್ಷೆಯಲ್ಲಿದೆ ಎಂದು ಇಸ್ರೋ ಹೇಳಿದೆ.ಬಳಿಕ ಚಂದ್ರನಿಗೆ 5 ಸುತ್ತುಗಳನ್ನು ಹಾಕಿ ಆ.23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುತ್ತದೆ.

ಇದು ಈ ಕಾರ್ಯಾಚರಣೆಯ ಅತ್ಯಂತ ನಿರ್ಣಾಯಕ ಹಂತವಾಗಿದೆ. ಲ್ಯಾಂಡರ್ ಚಂದ್ರನ ಮೇಲೆ ಮೃದು ಲ್ಯಾಂಡಿಂಗ್ ಮಾಡಿದರೆ, ಭಾರತ ಆ ಸಾಧನೆ ಮಾಡಿದ ಮೊದಲ ದೇಶವಾಗಲಿದೆ.