Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ.!

 

ಶಿವಮೊಗ್ಗ: ದೇಗುಲವನ್ನು ಕೆಡವಿ ನಿರ್ಮಿಸಿರುವ ಮಸೀದಿಗಳನ್ನು ಮುಸ್ಲಿಮರು ವಾಪಸ್ ತೆಗೆದುಕೊಳ್ಳಲಿ. ಇಲ್ಲವಾದರೆ ಹಿಂದೂ ಸಮಾಜವೇ ಮಸೀದಿಗಳನ್ನು ಕೆಡವಲಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶ್ರೀರಾಮ ಸೇನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಮ ಮಂದಿರ ನಿರ್ಮಿಸಿರುವುದಕ್ಕೆ ಕೆಲವರಿಗೆ ಕಸಿವಿಸಿಯಾಗಿದೆ. ಕೆಲವೇ ದಿನಗಳಲ್ಲಿ ಕಾಶಿಯಲ್ಲಿ ವಿಶ್ವನಾಥ್ ಮತ್ತು ಮಥುರಾದಲ್ಲಿ ಕೃಷ್ಣನ ದೇವಸ್ಥಾನಗಳನ್ನೂ ನಿರ್ಮಿಸುತ್ತೇವೆ ಎಂದಿದ್ದಾರೆ.