Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದಾದರೆ ಬಿಜೆಪಿ ಬೆಂಬಲಿಸುತ್ತೇನೆ’ -ಜನಾರ್ದನ್ ರೆಡ್ಡಿ

ಮಂಡ್ಯ: ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗುವುದಾದರೆ ಬಿಜೆಪಿಗೆ ಬೆಂಬಲಿಸುತ್ತೇನೆ ಎಂದು ಕೆ ಆರ್ ಪಿ ಪಿ ಪಕ್ಷದ ನಾಯಕ, ಶಾಸಕ ಜನಾರ್ದನ್ ರೆಡ್ಡಿ ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ತನ್ನದೇ ಆದ ಅಸ್ತಿತ್ವ ಹೊಂದಿದ್ದು, ಇಡೀ ದೇಶ ಪ್ರಧಾನಮಂತ್ರಿ ಮೋದಿಜಿ ಅವರು ಮತ್ತೊಮ್ಮೆ ಆಗಬೇಕೆಂಬುದು ಜನರ ಅಭಿಪ್ರಾಯವಿದೆ. ಅವರು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗುವುದಾದರೆ ಬಿಜೆಪಿಗೆ ತಾನು ಬೆಂಬಲಿಸುತ್ತೇನೆ ಎಂದು ತಿಳಿಸಿದ್ದಾರೆ

ನರೇಂದ್ರ ಮೋದಿ ಅವರ ವಿರುದ್ಧ ಎದುರಾಳಿ ಅಭ್ಯರ್ಥಿ ಇಲ್ಲ ಎಂದು ತಿಳಿದಿದೆ. ಹಾಗಾಗಿ ನಾನು ಬಿಜೆಪಿ ಪಕ್ಷವೇ ಹೊಂದಾಣಿಕೆಗೆ ಮುಂದಾದಲ್ಲಿಅದಕ್ಕೆ ಸಿದ್ಧ. ಇಲ್ಲವಾದರೆ ಕೆ.ಆರ್.ಪಿ ತನ್ನ ಸ್ವಂತ ಬಲದಲ್ಲಿ ನಾಲ್ಕು ಸ್ಥಾನಗಳನ್ನು ಪಾರ್ಲಿಮೆಂಟ್ ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದಿದ್ದಾರೆ.