Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮೋದಿ ಮ್ಯಾಜಿಕ್ ನಿಂದ ಬಿಜೆಪಿ ಗೆಲ್ಲಲ್ಲ.! ರಾಜ್ಯಸಭಾದ ಮಾಜಿ ಸದಸ್ಯ ಸುಬ್ರಮಣಿಯನ್ ಸ್ವಾಮಿ.!

ಪಟ್ನಾ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಮ್ಯಾಜಿಕ್ ನಿಂದ ಹೆಚ್ಚಿನ ಸ್ಥಾನಗಳು ಬರುವುದಿಲ್ಲವೆಂದು ರಾಜ್ಯಸಭಾದ ಮಾಜಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಪಟ್ನಾದಲ್ಲಿ ಮಾತನಾಡಿ, ‘ನಾವು ಹಿಂದೂಗಳು’ ಎಂಬ ಅಭಿಯಾನದಿಂದಲೇ ಬಿಜೆಪಿಯಿಂದ ಗೆಲ್ಲುವವರ ಸಂಖ್ಯೆ ಹಿಂದಿನ ಸ್ಥಾನಗಳಿಗಿಂತಲೂ ಹೆಚ್ಚಾಗುತ್ತದೆ. ಇದರಲ್ಲಿ ಮೋದಿ ಅವರಿಂದಲೇ ಬದಲಾಗಬಹುದೆಂದು ಕೆಲವರು ಭಾವಿಸಬಹುದು. ಆದರೆ, ಅವರಿಂದ ಈ ಮ್ಯಾಜಿಕ್ ಆಗುತ್ತದೆ ಎಂದು ನಾನು ನಂಬುವುದಿಲ್ಲವೆಂದು ಪ್ರತಿಕ್ರಿಯಿಸಿದ್ದಾರೆ.