Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಯಶ್ ಬೆಂಗಾವಲು ವಾಹನ ಡಿಕ್ಕಿ ಪ್ರಕರಣ : ಗಾಯಾಳು ನಿಖಿಲ್ ಸಾವು

ಗದಗದಲ್ಲಿ ಮತ್ತೊಬ್ಬ ನಟ ಯಶ್ ಅಭಿಮಾನಿ ಸಾವನ್ನಪ್ಪಿದ್ದು, ಯಶ್ ಅಭಿಮಾನಿ ನಿಖಿಲ್ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಖಿಲ್ ಕೊನೆಯುಸಿರೆಳದಿದ್ದಾನೆ. ಎಂದು ಹೇಳಲಾಗುತ್ತಿದೆ ಯಶ್ ನೋಡಲು ಅಭಿಮಾನಿ ನಿಖಿಲ್ ಬೈಕ್ ನಲ್ಲಿ ಬಂದಿದ್ದ ಎಂದು ಹೇಳಲಾಗುತ್ತಿದೆ.

ಈ ವೇಳೆ ಹಿಂಬಾಲಿಸುತ್ತಿದ್ದ ಅಭಿಮಾನಿ ನಿಖಿಲ್ ಬೈಕ್ ಗೆ ಈ ಸಂದರ್ಭದಲ್ಲಿ ಯಶ್ ಬೆಂಗಾವಲು ವಾಹನ ಡಿಕ್ಕಿಯಾಗಿದೆ. ತಕ್ಷಣ ಪೊಲೀಸರು ಉತ್ತಮ ವಾಹನದಲ್ಲೇ ನಿಖಿಲನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.ಗದಗದ ಮುಳಗುಂದ ನಾ ಕಾ ಬಳಿ ಈ ಪದದ ನಡೆದಿತ್ತು ಯಶ್ ವಾಪಸ್ ತೆರಳು ವೇಳೆ ನಡೆದ ದುರಂತವಾಗಿತ್ತು.

ಇದಿಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಗಾಯಾಳು ನಿಖಿಲ ಸಾವನ್ನಪ್ಪಿದ್ದಾರೆ, ನಿಖಿಲ್ ಗದಗ ತಾಲೂಕಿನ ಬಿಂಕದಕಟ್ಟೆ ಗ್ರಾಮದ ನಿವಾಸಿ ಎಂದು ಹೇಳಲಾಗುತ್ತಿದ್ದು, ಗದಗ ನಗರದ ಮುಳಗೊಂಡ ನಾಕಾ ಬಳಿ ನಿನ್ನೆ ಯಶ್ ಬೆಂಗಾವಲು ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದಿತ್ತು.

ಯಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬ್ಯಾನರ್ ಅಳವಡಿಸುವ ವೇಳೆ ವಿದ್ಯುತ್ ಶಾಕ್ ನಿಂದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸುಣಧೂರು ಗ್ರಾಮದ ಮೂರು ಯುವಕರು ಸಾವನ್ನಪ್ಪಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಗ್ರಾಮಕ್ಕೆ ನಿನ್ನೆ ಯಶ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತನ ಹೇಳಿ ನಂತರ ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದ್ದರು.

ಆಸ್ಪತ್ರೆಗೆ ಬೇಟಿ ನೀಡಿದ ನಂತರ ವಾಪಸ್ ತೆರಳುವ ವೇಳೆ ಯಶ್ ಭದ್ರತಾ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ನಿಖಿಲ ಗಂಭೀರವಾಗಿ ಗಾಯಗೊಂಡಿದ್ದರು ಈ ವೇಳೆ ತಕ್ಷಣ ಪೊಲೀಸರು ತಮ್ಮ ವಾಹನದಲ್ಲೇ ನಿಖಿಲ್ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ದಿಮ್ಸ್ ಆಸ್ಪತ್ರೆಯಿಂದ ನಿಖಿಲನ್ನು ಖಾಸಿಗೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಿಗ್ಗೆ ನಿಖಿಲ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.