Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಯುಗಾದಿ ರಥೋತ್ಸವದ ವೇಳೆ ಘೋರ ದುರಂತ – ವಿದ್ಯುತ್ ಸ್ಪರ್ಶಿಸಿ 13 ಮಕ್ಕಳು ಗಂಭೀರ ಗಾಯ

ಆಂಧ್ರಪ್ರದೇಶ : ಯುಗಾದಿ ರಥೋತ್ಸವದ ವೇಳೆ 13 ವಿದ್ಯಾರ್ಥಿಗಳು ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ತೇಕೂರ್ ಗ್ರಾಮದಲ್ಲಿ ನಡೆದಿದೆ.

ಮೆರವಣಿಗೆ ವೇಳೆ ರಥವು ಓವರ್‌ಹೆಡ್ ಹೈವೋಲ್ಟೇಜ್ ವಿದ್ಯುತ್ ತಂತಿಗೆ ತಗುಲಿ ಕನಿಷ್ಠ 13 ಮಕ್ಕಳು ಗಾಯಗೊಂಡಿದ್ದಾರೆ. ವಿದ್ಯುದಾಘಾತಕ್ಕೊಳಗಾದ ಮಕ್ಕಳನ್ನು ಚಿಕಿತ್ಸೆಗಾಗಿ ಕರ್ನೂಲ್‌ನ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಕ್ಕಳ ಜೀವಕ್ಕೆ ತಕ್ಷಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ಘಟನೆಯಲ್ಲಿ ಯಾವುದೇ ಸಾವುಗಳು ಸಂಭವಿಸಿಲ್ಲ. ಗಾಯಗೊಂಡ ಮಕ್ಕಳನ್ನು ಭೇಟಿ ಮಾಡಲು ವೈಎಸ್‌ಆರ್‌ಸಿಪಿ ಮುಖಂಡ ಮತ್ತು ಪಾಣ್ಯಂ ಶಾಸಕ ಕಾಟಸಾನಿ ರಾಮಭೂಪಾಲ್ ರೆಡ್ಡಿ ಮತ್ತು ನಂದ್ಯಾಳ ಟಿಡಿಪಿ ಅಭ್ಯರ್ಥಿ ಬೈರೆಡ್ಡಿ ಶಬರಿ ಆಸ್ಪತ್ರೆಗೆ ಭೇಟಿ ನೀಡಿದರು.