Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಾಮಮಂದಿರ ಉದ್ಘಾಟನೆ ’ಮೋದಿಯವರ ಫಂಕ್ಷನ್ ’ ರಾಹುಲ್ ಟೀಕೆ

ನವದೆಹಲಿ: ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಉದ್ಘಾಟನಾ ಸಮಾರಂಭ ಮೋದಿ ಕಾ ಪಂಕ್ಷನ್(ಮೋದಿಯವರ ಕಾರ್ಯಕ್ರಮ) ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಭಾರತ್ ನ್ಯಾಯ್ ಯಾತ್ರೆಯ ನಡುವೆ, ಮಾಧ್ಯಮದೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಮತ್ತು ಬಿಜೆಪಿ ಜನವರಿ 22 ರ ಕಾರ್ಯವನ್ನು ಸಂಪೂರ್ಣವಾಗಿ ರಾಜಕೀಯಗೊಳಿಸಿದ್ದು, ಇದನ್ನು ನರೇಂದ್ರ ಮೋದಿ ಕಾರ್ಯಕ್ರಮದಂತೆ ಬಿಂಬಿಸಿದೆ. ಇದಕ್ಕಾಗಿಯೇ ಇದೊಂದು ಆರ್‌ಎಸ್‌ಎಸ್ – ಬಿಜೆಪಿ ಪ್ರಯೋಜಿತ ಕಾರ್ಯಕ್ರಮವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಹೇಳಿರುವುದು ಎಂದು ಹೇಳಿದ್ದಾರೆ.

ನಾವು ಎಲ್ಲಾ ಧರ್ಮಗಳು, ಎಲ್ಲಾ ಆಚರಣೆಗಳಿಗೆ ಮುಕ್ತವಾಗಿದ್ದೇವೆ. ಆದ್ದರಿಂದ ಭಾರತದ ಪ್ರಧಾನ ಮಂತ್ರಿಯ ಹಾಗೂ ಆರ್‌ಎಸ್‌ಎಸ್ ಕೇಂದ್ರಿತವಾಗಿ ವಿನ್ಯಾಸಗೊಳಿಸಲಾದ ರಾಜಕೀಯ ಕಾರ್ಯಕ್ರಮಕ್ಕೆ ನಾವು ಹೋಗುವುದು ಕಷ್ಟ ಎಂದು ಬಿಜೆಪಿಯನ್ನು ರಾಹುಲ್ ತರಾಟೆಗೆ ತೆಗೆದುಕೊಂಡಿದ್ದಾರೆ.