Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಾಮಲಲ್ಲಾ ಪ್ರತಿಷ್ಠಾಪನೆ ಶುಭದಿನವೇ 60ಕ್ಕೂ ಮಕ್ಕಳ ಜನನ

ಬೆಂಗಳೂರು: ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಅದ್ಧೂರಿಯಾಗಿ ನೆರವೇರಿದೆ. ಲಕ್ಷಾಂತರ ಮಂದಿ ರಾಮಭಕ್ತರ  ಇಂದು ಕನಸು ನನಸಾಗಿದೆ.

ಈ ಶುಭಗಳಿಗೆಯಲ್ಲಿ ವಿವಿಧ ರಾಜ್ಯಗಳಲ್ಲಿ ಹಲವು ತಾಯದಿಂದರು ತಮ್ಮ ಮಗುವಿಗೆ ಜನ್ಮ ನೀಡುವ ಮೂಲಕ ಸಂಭ್ರಮಪಟ್ಟರು. ಈ ದಿನ ಬೆಂಗಳೂರಿನಲ್ಲಿ 60ಕ್ಕೂ ಹೆಚ್ಚು ಕಂದಮ್ಮಗಳು ಜನ್ಮ ಪಡೆದುಕೊಂಡಿವೆ. ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾಪನೆ ದಿನ ಕಂದಮ್ಮ ಜನಿಸಬೇಕು ಎಂಬ ಆಸೆ ಅದೆಷ್ಟೋ ಪೊಷಕರದಾಗಿತ್ತು.

ಈ ಶುಭ ದಿನದಂದು ರಾಮನಂತಹ ಮಗು, ಸೀತೆಯಂತಹ ಮಗಳು ಪಡೆಯಲು ಹಚ್ಚಿನ ಪೋಷಕರು ಆಸಕ್ತಿ ವಹಿಸಿದ್ದು, ಹಾಗಾಗಿ ಇದುವರೆಗೂ ರಾಜ್ಯದಲ್ಲಿ 40ಕ್ಕೂ ಹೆಚ್ಚು ಶಿಶುಗಳು ಜನನವಾಗಿದೆ ಎನ್ನಲಾಗಿದೆ.