Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ ‘ಜ್ಞಾನವಾಪಿ ಸಿನಿಮಾ’

ನವದೆಹಲಿ : ಕಾಶ್ಮೀರ್ ಫೈಲ್ಸ್‌ ಮತ್ತು ಕಾರ್ತಿಕೇಯ-2 ನಂತಹ ಬ್ಲಾಕ್ ಬಸ್ಟರ್ ಸಿನಿಮಾನಗಳ ಬಳಿಕ ನಿರ್ಮಾಪಕ ಅಗರ್ವಾಲ್ ಮತ್ತೊಂದು ವಿಷಯದ ಮೇಲೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ.

ಜ್ಞಾನವಾಪಿ ಮಸೀದಿ ವಿಚಾರವಾಗಿ ‘ಜ್ಞಾನವಾಪಿ’ ಎಂಬ ಸಿನಿಮಾ ನಿರ್ಮಿಸುವಿದಾಗಿ ಅವರು ತಿಳಿಸಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗಿದೆ. ಪ್ರಸ್ತು, ದಿ ಡೆಲ್ಲಿ ಫೈಲ್ಸ್ ಮತ್ತು ದಿ ಇಂಡಿಯಾ ಹೌಸ್, ಚಿತ್ರಗಳು ನಿರ್ಮಾಣ ಹಂತದಲ್ಲಿದ್ದು, ಇದಾದ ನಂತರ ‘ಜ್ಞಾನವಾಪಿ ಸಿನಿಮಾ ಬಿಡುಗಡೆ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.