Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಶೀಘ್ರದಲ್ಲೇ ರಾಜ್ಯದ IPS ಅಧಿಕಾರಿ ಅರೆಸ್ಟ್ ; ಹೊಸ ಬಾಂಬ್ ಸಿಡಿಸಿದ ಯತ್ನಾಳ.!

ಬೆಂಗಳೂರು : ಓರ್ವ ಐಪಿಎಸ್ ಅಧಿಕಾರಿಯನ್ನು (IPS officer) ಶೀಘ್ರದಲ್ಲಿ ಬಂಧಿಸಲಾಗುತ್ತದೆ ಅಂತ ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್‌ ಅವರು ಹೊಸ ಬಾಂಬ್‌ಅನ್ನು ಸಿಡಿಸಿದ್ದಾರೆ.ಯತ್ನಾಳ ಅವರು ಶಿವಮೊಗ್ಗದಲ್ಲಿಂದು ಪಂಚಮಸಾಲಿ 2ಎ ಮೀಸಲಾತಿ ಹೋರಾಟದಲ್ಲಿ ಭಾಗವಹಿಸಿದ್ದರು.ಈ ವೇಳೆ ಮಾತನಾಡಿದ ಅವರು, ಸ್ವಯಂ ಘೋಷಿತ ಲಿಂಗಾಯತ ನಾಯಕರೊಬ್ಬರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ (future) ಮೀಸಲಾತಿಗೆ ಅಡ್ಡ ಹಾಕಿದ್ದಾರೆ ಅಂತ ಕಿಡಿಕಾರಿದರು.ಇನ್ನೂ ನಾನು ಮಂತ್ರಿ ಆಗುವುದಕ್ಕೆ, ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕ (opposition party) ಆಗುವುದಕ್ಕೆ ಸ್ವಾಮೀಜಿಯಿಂದ ಲಾಬಿ ಮಾಡಲ್ಲ. ನನ್ನ ಸೋಲಿಸಲು ಕೆಲವರು ವಿಜಯಪುರಕ್ಕೆ ಬಹಳ ಹಣ ಕಳಿಸಿದರು ಅಂತ ತಿಳಿಸಿದರು.ಅಲ್ಲದೇ ಇದೇ ವೇಳೆ ಮುಂದಿನ ದಿನದಲ್ಲಿ ಐಪಿಎಸ್ ಅಧಿಕಾರಿಯೊಬ್ಬ ಅರೆಸ್ಟ್ (Attest) ಆಗುತ್ತಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಅರೆಸ್ಟ್​ ಆಗಲಿರುವ ಆ ಐಪಿಎಸ್​ ಅಧಿಕಾರಿ ಯಾರು? ಯಾವ ಪ್ರಕರಣ? ಎಂದು ​ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.